ವಿಟ್ಲ: ವಿಟ್ಲ ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ಕ್ಷೇತ್ರದ “ಅಪ್ಪೆನ ಮಟ್ಟೆಲ್” ತುಳು ಭಕ್ತಿ ಗೀತೆಯನ್ನು ಭಾನುವಾರ ಶ್ರಿ ಕ್ಷೇತ್ರದಲ್ಲಿ ಧರ್ಮದರ್ಶಿ ಶ್ರೀ ಶ್ರೀ ಶ್ರೀಕೃಷ್ಣ ಗುರೂಜಿ ಶ್ರೀ ಕ್ಷೇತ್ರ ಕುಕ್ಕಾಜೆ ಅವರು ಬಿಡುಗಡೆ ಮಾಡಿ ಆಶೀರ್ವದಿಸಿದರು.
ಈ ಸಂದರ್ಭದಲ್ಲಿ ಕೃಷ್ಣಪ್ಪ ಕುಕ್ಕಾಜೆ ದಯಾನಂದ ಅಮೀನ್ ಬಾಯಾರು, ಸಾಹಿತಿ ದೀಕ್ಷಿತ್ ಮಾಣಿಲ, ಗಾಯಕಿ ಸುಮಿತ್ರಾ ಬಾಯಂಬಾಡಿ ಮತ್ತಿತರರು ಉಪಸ್ಥಿತರಿದ್ದರು. ಹಾಡಿಗೆ ಗಾಯನ ಮತ್ತು ಸಾಹಿತ್ಯ ಮಾಡಿದವರನ್ನು ಗೌರವಿಸಲಾಯಿತು. ದಯಾ ಕ್ರಿಯೇಷನ್ ಮೂಲಕ ಹೊರ ಹೊಮ್ಮಿದ ಹಾಡಿಗೆ ಧರ್ಮದರ್ಶಿ ಶ್ರೀಕೃಷ್ಣ ಗುರೂಜಿ ಶ್ರೀ ಕ್ಷೇತ್ರ ಕುಕ್ಕಾಜೆ ಶುಭಶಿರ್ವಾದ ಮಾಡಿದ್ದಾರೆ.
ಗೋಪಾಲ ಶೆಟ್ಟಿ ಮಿಯಪದವು ಗುತ್ತು, ನರೇಂದ್ರ ಶೆಟ್ಟಿ ಕರ್ನಿರೆ ಮಗಂದಾಡಿ ಕಟಪಾಡಿ, ರವೀಂದ್ರನಾಥ ಎಲ್ ಕರ್ಕೇರ ಸಸಿಹಿತ್ಲು, ಇವರ ನಿರ್ಮಾಣದಲ್ಲಿ ದೀಕ್ಷಿತ್ ಮಾಣಿಲ ಸಾಹಿತ್ಯದಲ್ಲಿ ತುಳುಭಕ್ತಿ ಗೀತೆ ಮೂಡಿಬಂದಿದೆ. ಸುಮಿತ್ರಾ ಬಾಯಂಬಾಡಿ ಗಾಯನ ಮಾಡಿದ್ದು, ಸಾಕ್ಷಿ ಗುರುಪುರ ಅಭಿನಯಿಸಿದ್ದಾರೆ. ಸುದರ್ಶನ್ ತಾರಿದಳ ಛಾಯಾಗ್ರಹಣ ಮತ್ತು ಸಂಕಲನ ಮಾಡಿದ್ದಾರೆ. ದಯಾನಂದ ಅಮೀನ್ ಬಾಯಾರು ಸಮಗ್ರ ನಿರ್ವಹಣೆಯಲ್ಲಿ ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ಕ್ಷೇತ್ರದ “ಅಪ್ಪೆನ ಮಟ್ಟೆಲ್” ತುಳು ಭಕ್ತಿ ಗೀತೆಯನ್ನು ದಯಾ ಕ್ರಿಯೇಷನ್, ಯೂ ಟ್ಯೂಬ್ ನಲ್ಲಿ ಆಲಿಸಬಹುದಾಗಿದೆ.