ಗುಂಡ್ಲುಪೇಟೆ: ಹಿಮಗಿರಿ ಬಾರ್ ಅಂಡ್ ರೆಸ್ಟೋರೆಂಟ್ ನಿಂದ ಹಗಲು ದರೋಡೆ ಎಂಬ ಸುದ್ದಿಗೆ ಸಂಬಂದಿಸಿದಂತೆ ಮಾಲೀಕರಿಗೆ ನೋಟೀಸ್ ನೀಡಿರುವ ಅಬಕಾರಿ ಇಲಾಖೆ ಅಧಿಕಾರಿಗಳು ಏಳು ದಿನಗಳ ಒಳಗೆ ಸಮಜಾಯಿಷಿ ನೀಡುವಂತೆ ಸೂಚನೆ ನೀಡಿದ್ದಾರೆ.
ಹಂಗಳ ಗ್ರಾಮದಲ್ಲಿನ ಹಿಮಗಿರಿ ಬಾರ್ ಅಂಡ್ ರೆಸ್ಟೋರೆಂಟ್ ಎಂ ಆರ್ ಪಿ ದರಕ್ಕಿಂತ ದುಪ್ಪಟ್ಟು ಹಣವನ್ನು ಮದ್ಯಪ್ರಿಯರಿಂದ ವಸೂಲಿ ಮಾಡುತ್ತಿತ್ತು. ಈ ವಿಚಾರವನ್ನು ನ್ಯೂಸ್ ಕನ್ನಡ ವಾಹಿನಿಯು ಸಾಕ್ಷಿ ಸಮೇತವಾಗಿ ಜನತೆಯ ಮುಂದಿರಿಸಿ ಅಬಕಾರಿ ಇಲಾಖೆ ಅಧಿಕಾರಿಗಳ ಗಮನ ಸೆಳೆದಿತ್ತು. ನ್ಯೂಸ್ ಕನ್ನಡ ವಾಹಿನಿಯ ಸುದ್ದಿಗೆ ಎಚ್ಚೆತ್ತ ಅಬಕಾರಿ ಇಲಾಖೆ ಅಧಿಕಾರಿಗಳು ಹಿಮಗಿರಿ ಬಾರ್ ಅಂಡ್ ರೆಸ್ಟೋರೆಂಟ್ ಮಾಲೀಕ ನಾರಾಯಣಸ್ವಾಮಿ ಅವರಿಗೆ ನೋಟಿಸ್ ನೀಡಿ ಏಳು ದಿನಗಳ ಒಳಗೆ ಸಮಜಾಯಿಷಿ ನೀಡಬೇಕು ಹಾಗೂ ಸಿಸಿಟಿವಿ ಚಿತ್ರ, ವಿಡಿಯೋ ಪುಟೇಜ್ ನೀಡುವಂತೆ ಸೂಚಿಸಿದ್ದಾರೆ.