ಹೊಸದಿಲ್ಲಿ: ಭಾರತದಲ್ಲಿ ತಲೆ ಮತ್ತು ಕುತ್ತಿಗೆಯ ಕ್ಯಾನ್ಸರ್ ಪ್ರಕರಣಗಳು ಹೆಚ್ಚುತ್ತಿರುವುದರ ಹಿಂದೆ ತಂಬಾಕು ಮತ್ತು ಮದ್ಯಪಾನದ ಬಳಕೆಯೇ ಕಾರಣ ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ.
ಗ್ಲೋಬಲ್ ಕ್ಯಾನ್ಸರ್ ಅಬ್ಸರ್ವೇಟರಿ (ಗ್ಲೋಬೊಕಾನ್) ಅಂದಾಜಿನ ಪ್ರಕಾರ, 2020 ರಲ್ಲಿ ವಿಶ್ವಾದ್ಯಂತ 19.3 ಮಿಲಿಯನ್ ಘಟನೆ ಕ್ಯಾನ್ಸರ್ ಪ್ರಕರಣಗಳು ಸಂಭವಿಸಿವೆ ಮತ್ತು ಚೀನಾ ಮತ್ತು ಯುಎಸ್ ನಂತರ ಭಾರತ 3ನೇ ಸ್ಥಾನದಲ್ಲಿದೆ.
ಒಟ್ಟಾರೆಯಾಗಿ, ಜಾಗತಿಕ ತಲೆ ಮತ್ತು ಕುತ್ತಿಗೆ ಕ್ಯಾನ್ಸರ್ ಪ್ರಕರಣಗಳಲ್ಲಿ ಶೇಕಡಾ 57.5 ರಷ್ಟು ಏಷ್ಯಾದಲ್ಲಿ ಸಂಭವಿಸುತ್ತವೆ ಮತ್ತು ಈ ಪ್ರಕರಣಗಳಲ್ಲಿ ಶೇಕಡಾ 30 ರಷ್ಟು ಭಾರತದ್ದಾಗಿದೆ. ವಾರ್ಷಿಕವಾಗಿ, ಭಾರತದಲ್ಲಿ, ತಲೆ ಮತ್ತು ಕುತ್ತಿಗೆಯ ಕ್ಯಾನ್ಸರ್ ನ ಹರಡುವಿಕೆಯು ಸರಿಸುಮಾರು 5,00,000 ಪ್ರಕರಣಗಳಾಗಿದ್ದು, 1,25,000 ಕ್ಕೂ ಹೆಚ್ಚು ಸಾವುಗಳು ಸಂಭವಿಸುತ್ತವೆ.
ಎಚ್ ಎನ್ ಸಿ(ತಲೆ ಮತ್ತು ಕುತ್ತಿಗೆಯ ಕ್ಯಾನ್ಸರ್ ) ಬಗ್ಗೆ ಮಾತನಾಡುವಾಗ, ಇದು ಸಾಮಾನ್ಯವಾಗಿ ನಾಲಿಗೆ, ಬಾಯಿ, ಗಂಟಲಿನ ಇತರ ಭಾಗಗಳಾದ ಓರೋಫರಿಂಕ್ಸ್, ನಾಸೊಫರಿಂಕ್ಸ್, ಹೈಪೋಫರಿಂಕ್ಸ್, ಲಾಲಾರಸ ಗ್ರಂಥಿಗಳು, ಮೂಗಿನ ಕುಳಿ, ಧ್ವನಿನಾಳ (ಧ್ವನಿ ಪೆಟ್ಟಿಗೆ) ಇತ್ಯಾದಿಗಳನ್ನು ಒಳಗೊಂಡಿರುತ್ತದೆ.
“ತಲೆ ಮತ್ತು ಕುತ್ತಿಗೆಯ ಕ್ಯಾನ್ಸರ್ ಅಪಾಯ ಬೇರೆ ಬೇರೆ ಅಂಶಗಳಿಂದ ಉದ್ಭವಿಸುತ್ತದೆ. ತಂಬಾಕು ಬಳಕೆ ಮತ್ತು ಆಲ್ಕೋಹಾಲ್ ಸೇವನೆಯು ಇದಕ್ಕೆ ಅತ್ಯಂತ ಗಮನಾರ್ಹ ಕೊಡುಗೆ. ದೀರ್ಘಕಾಲದ ಧೂಮಪಾನ ಅಥವಾ ಜಗಿಯುವ ತಂಬಾಕು (ಗುಟ್ಕಾದಂತಹ) ಮತ್ತು ಆಲ್ಕೋಹಾಲ್ ಸೇವನೆಯು ಸೆಲ್ಯುಲಾರ್ ಹಾನಿ ಮತ್ತು ಆನುವಂಶಿಕ ರೂಪಾಂತರಗಳಿಗೆ ಕಾರಣವಾಗಿ, ಕ್ಯಾನ್ಸರ್ ಸಾಧ್ಯತೆಯನ್ನು ಹೆಚ್ಚಿಸುತ್ತದೆ.
ಪ್ರಮುಖವಾಗಿ ಭಾರತದಲ್ಲಿ, ಸುಪಾರಿ ತಿನ್ನುವುದು ಬಾಯಿಯ ಚರ್ಮದ ಒಳಪದರದಲ್ಲಿ ಬದಲಾವಣೆಗಳಿಗೆ ಕಾರಣವಾಗುತ್ತದೆ, ಇದು ಬಾಯಿಯ ಕ್ಯಾನ್ಸರ್ ಗೆ ಕಾರಣವಾಗಬಹುದು. ಇತ್ತೀಚೆಗೆ, ಹ್ಯೂಮನ್ ಪ್ಯಾಪಿಲೋಮಾವೈರಸ್ (ಎಚ್ ಪಿವಿ) ಸೋಂಕುಗಳು ಗಂಟಲಿನ ಕ್ಯಾನ್ಸರ್ ಗೆ ಕಾರಣವಾಗಿದೆ.
Cancer.net ರ ವರದಿಯ ಪ್ರಕಾರ, ‘ತಲೆ ಮತ್ತು ಕುತ್ತಿಗೆಯ ಕ್ಯಾನ್ಸರ್ಗಳಲ್ಲಿ 70 ಪ್ರತಿಶತದಿಂದ 80 ಪ್ರತಿಶತದಷ್ಟು ತಂಬಾಕು ಬಳಕೆಯಿಂದ ಸಂಭವಿಸಿದೆ. ಇದರಿಂದಾಗಿ ತಂಬಾಕು ಬಳಕೆ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ’ ಎಂದಿದೆ.
ಎಚ್ ಎನ್ ಸಿಯ ಆರಂಭಿಕ ಪತ್ತೆ ಮತ್ತು ರೋಗನಿರ್ಣಯವು ಗುಣಪಡಿಸುವ ಶೇ. 80-90 ರಷ್ಟು ಸಹಕಾರಿಯಾಗಿದೆ. ಗಂಟಲು ನೋವು, ಊತ, ನುಂಗಲು ಕಷ್ಟವಾಗುವುದು, ಸೈನಸ್ ಸೋಂಕು, ಬಾಯಿಯಲ್ಲಿ ಕೆಂಪು ಮಚ್ಚೆಗಳು, ದವಡೆಯಲ್ಲಿ ಮರಗಟ್ಟುವಿಕೆ ಮತ್ತು ಹೆಚ್ಚಿನವು ಎಚ್ ಎನ್ ಸಿ ಯ ಸಾಮಾನ್ಯ ಲಕ್ಷಣಗಳಾಗಿವೆ. ಹೀಗಾಗಿ ಸಮಯೋಚಿತ ಚಿಕಿತ್ಸೆ ಪಡೆಯಲು ಈ ರೋಗಲಕ್ಷಣಗಳನ್ನು ಗುರುತಿಸುವುದು ಅತೀ ಅವಶ್ಯಕ.