News Karnataka Kannada
Sunday, April 28 2024
ಕ್ರೈಮ್

ಕರ್ಣಿ ಸೇನಾ ಮುಖ್ಯಸ್ಥನ ಕೊಲೆ ಆರೋಪಿಯ ಬಂಧನ; ೩೧ ಕಡೆಗಳಲ್ಲಿ ಶೋಧಕಾರ್ಯ

ಕರ್ಣಿ ಸೇನಾ ಮುಖ್ಯಸ್ಥ ಸುಖದೇವ್ ಸಿಂಗ್ ಗೊಗಮೆಡಿಯವರು ಕಳೆದ ತಿಂಗಳು ಜೈಪುರದ ತಮ್ಮ ಮನೆಯಲ್ಲಿ ಹತ್ಯೆಯಾಗಿದ್ದು, ಕೊಲೆಯ ಶಂಕಿತ ಆರೋಪಿ ಅಶೋಕ್ ಮೇಘವಾಲ್ ನನ್ನು ಬಂಧಿಸಲಾಗಿದೆ. ಇದುವರೆಗೆ ಒಟ್ಟು ೯ ಜನರನ್ನು ಬಂಧಿಸಲಾಗಿದೆ.
Photo Credit : News Kannada

ನವದೆಹಲಿ: ಕರ್ಣಿ ಸೇನಾ ಮುಖ್ಯಸ್ಥ ಸುಖದೇವ್ ಸಿಂಗ್ ಗೊಗಮೆಡಿಯವರು ಕಳೆದ ತಿಂಗಳು ಜೈಪುರದ ತಮ್ಮ ಮನೆಯಲ್ಲಿ ಹತ್ಯೆಯಾಗಿದ್ದು, ಕೊಲೆಯ ಶಂಕಿತ ಆರೋಪಿ ಅಶೋಕ್ ಮೇಘವಾಲ್ ನನ್ನು ಬಂಧಿಸಲಾಗಿದೆ. ಇದುವರೆಗೆ ಒಟ್ಟು ೯ ಜನರನ್ನು ಬಂಧಿಸಲಾಗಿದೆ.

ಉಗ್ರ ನಿಗ್ರಹ ದಳದ ಮೂರು ತಂಡ ರಾಜಸ್ಥಾನದ ಪಿಲನಿಯ ಹಳ್ಳಿಯೊಂದರ ಮೇಲೆ ದಾಳಿ ನಡೆಸಿ ಸತತ ೧೦ ಗಂಟೆಗಳ ಶೋಧಕಾರ್ಯ ನಡೆಸಿದ ಬೆನ್ನಲ್ಲೇ ಈ ಬೆಳವಣಿಗೆಯಾಗಿದೆ. ರಾಜಸ್ಥಾನ ಮತ್ತು ಹರಿಯಾಣದ ಒಟ್ಟು ೩೧ ಕಡೆಗಳಲ್ಲಿ ಎನ್.ಐ.ಎ ದಾಳಿ ನಡೆಸಲಾಗಿತ್ತು. ಈ ವೇಳೆ ಭಾರೀ ಪ್ರಮಾಣದ ಪಿಸ್ತೂಲುಗಳು, ಮೊಬೈಲ್, ಸಿಮ್ ಕಾರ್ಡ್ ಡಿ.ವಿ.ಆರ್ ಸೇರಿದಂತೆ ಹಲವು ಡಿಜಿಟಲ್ ಉಪಕರಣಗಳು, ಹಣಕಾಸಿನ ವ್ಯವಹಾರದ ಕುರಿತಾದ ಕೆಲ ಕಡತಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿ ಅಶೋಕ್ ನಿಂದ ೮ ಅಕ್ರಮ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಈತ ಲಾರೆನ್ಸ್ ಬಿಶ್ನೋಯ್ ಗ್ಯಾಂಗ್ ನ ಸದಸ್ಯ ರೋಹಿತ್ ಗೋದಾರನೊಟ್ಟಿಗೆ ಸಂಪರ್ಕದಲ್ಲಿದ್ದುದು ತಿಳಿದುಬಂದಿದೆ.

ಡಿಸೆಂಬರ್ ೫ರಂದು ಸುಖದೇವ್ ಸಿಂಗ್ ಗೊಗಮೆಡಿ ನಾಲ್ಕು ಜನರೊಂದಿಗೆ ತಮ್ಮ ಮನೆಯಲ್ಲಿ ಚಹಾ ಸೇವಿಸುತ್ತಿದ್ದ ಸಂದರ್ಭದಲ್ಲಿ ಅವರ ಮೇಲೆ ಇಬ್ಬರು ಬಂದೂಕುಧಾರಿಗಳಿಂದ ಆದ ದಾಳಿಯಲ್ಲಿ ಅವರು ಮೃತಪಟ್ಟಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು