ರಸಂ ಎಲ್ಲರೂ ಇಷ್ಟಪಡುತ್ತಾರೆ. ಊಟದ ಜತೆಗೆ ರಸಂ ಬೇಕೆಂದು ಬಯಸುವವರು ವಿವಿಧ ನಮೂನೆಯ ರಸಂ ಮಾಡಬಹುದು ಅದರಲ್ಲಿ ಮಾವಿನ ಕಾಯಿ ರಸಂ ಕೂಡ ಸೇರುತ್ತದೆ. ಈ ಮಾವಿನ ಕಾಯಿ ರಸಂ ಮಾಡುವುದು ತುಂಬಾ ಸುಲಭವಾಗಿರುವುದರಿಂದ ಯಾರೂ ಬೇಕಾದರೂ ತಯಾರು ಮಾಡಲು ಅಡ್ಡಿಯಿಲ್ಲ.
ಬೇಕಾಗುವ ಪದಾರ್ಥಗಳು: ಚಿಕ್ಕದಾದ ಮಾವಿನ ಕಾಯಿ- ಒಂದು, ಹಸಿಮೆಣಸು- ಮೂರರಿಂದ ನಾಲ್ಕು, ಕೊಬ್ಬರಿಪುಡಿ- ಎರಡು ಟೀ ಚಮಚ, ಕಾಳುಮೆಣಸಿನ ಪುಡಿ- ಚಿಟಿಕೆಯಷ್ಟು, ಬೆಳ್ಳುಳ್ಳಿ- ಆರು ಎಸಳು, ಈರುಳ್ಳಿ- ಸ್ವಲ್ಪ, ಅರಿಶಿಣಪುಡಿ- ಅರ್ಧ ಟೀ ಚಮಚ, ಹುರಿಗಡಲೆ – ಸ್ವಲ್ಪ, ಉಪ್ಪು- ರುಚಿಗೆ ತಕ್ಕಷ್ಟು, ಎಣ್ಣೆ- ಒಗ್ಗರಣೆಗೆ ಅಗತ್ಯವಿರುವಷ್ಟು(ಒಂದು ಟೇಬಲ್ ಚಮಚ). ಕೊತ್ತಂಬರಿ ಸೊಪ್ಪು- ಸ್ವಲ್ಪ, ಕರಿಬೇವು ಸೊಪ್ಪು- ಸ್ವಲ್ಪ, ಒಣಮೆಣಸು- ಎರಡು,ಸಾಸಿವೆ- ಸ್ವಲ್ಪ
ಮಾಡುವ ವಿಧಾನ ಹೇಗೆ?: ಮಾವಿನ ಕಾಯಿಯನ್ನು ಹಚ್ಚಿಟ್ಟುಕೊಂಡು ಅದಕ್ಕೆ ಹಸಿಮೆಣಸು ಬೆಳ್ಳುಳ್ಳಿ, ಅರಿಶಿಣ, ಕಾಳು ಮೆಣಸು, ಹುರಿಗಡಲೆ, ಕೊಬ್ಬರಿ ಹಾಕಿ ಚೆನ್ನಾಗಿ ಮಿಕ್ಸಿ ಮಾಡಿಟ್ಟುಕೊಳ್ಳಿ. ಮತ್ತೊಂದೆಡೆ ಪಾತ್ರೆಯಲ್ಲಿ ಎಣ್ಣೆ ಹಾಕಿ ಅದು ಕಾದ ಬಳಿಕ ಸಾಸಿವೆ ಹಾಕಿ ಅದು ಸಿಡಿದ ನಂತರ ಹಚ್ಚಿದ ಈರುಳ್ಳಿ ಹಾಕಿ ಹಾಗೂ ಕರಿಬೇವು(ಒಗ್ಗರಣೆ) ಸೊಪ್ಪು ಹಾಕಿ ಚೆನ್ನಾಗಿ ಹುರಿಯಿರಿ, ಈರುಳ್ಳಿ ಬೆಂದ ಬಳಿದ ಅದಕ್ಕೆ ಒಣಮೆಣಸನ್ನು ಹಾಕಿ ಅದು ಸ್ವಲ್ಪ ಕಾಯುತ್ತಿದ್ದಂತೆಯೇ ಮಿಕ್ಸಿ ಮಾಡಿಟ್ಟ ಮಾವಿನ ಕಾಯಿಯ ಗೊಜ್ಜನ್ನು ಅದಕ್ಕೆ ಸುರಿದು ತಿರುಗಿಸಿ ಎರಡು ಲೋಟ ನೀರು ಹಾಕಿ ಬಳಿಕ ರುಚಿ ನೋಡಿಕೊಂಡು ಉಪ್ಪು ಹಾಕಿ ಚೆನ್ನಾಗಿ ಕುದಿದ ಬಳಿಕ ಕೊತ್ತಂಬರಿ ಸೊಪ್ಪನ್ನು ಉದುರಿಸಿ ಇಳಿಸಿದರೆ ಮಾವಿನಕಾಯಿ ರಸಂ ರೆಡಿ.
ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಕೇಸ್ನಲ್ಲಿ ಸಂತ್ರಸ್ತ ಮಹಿಳೆಯನ್ನ ಕಿಡ್ನಾಪ್ ಮಾಡಿದ ಪ್ರಕರಣದಲ್ಲಿ ಬಂಧಿತರಾಗಿರುವ ಹೆಚ್ ಡಿ ರೇವಣ್ಣ ಎಸ್ಐಟಿ…
ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿ ಅವರು ಕಾಮಾಕ್ಯ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ಕುರಿತ ಫೋಟೋಗಳು…
ಚಿಕನ್ ಶವರ್ಮ ಎಂದರೆ ಕೆಲವರಿಗೆ ತುಂಬ ಪ್ರಿಯ ಇದರ ಅಡ್ಡ ಪರಿಣಾಮ ತಿಳಿದಿದ್ದರು ತಿನ್ನುವುದು ಕಡಿಮೆ ಮಾಡುವುದಿಲ್ಲ ಆದರೆ ಇದೇ…
ಜಿಲ್ಲೆಯ ಮುಜರಾಯಿ ಇಲಾಖೆಗೆ ಒಳಪಡುವ ದೇಗುಲಗಳಲ್ಲಿ ವಸ್ತ್ರ ಸಂಹಿತೆ ಜಾರಿ ಮಾಡುವ ಬಗ್ಗೆ ಮೇ8ರಂದು ಅಭಿಯಾನ ನಡೆಸಲು ಚಿಂತನೆ ನಡೆಸಲಾಗಿದೆ.
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಪೆನ್ಡ್ರೈವ್ ಪ್ರಕರಣದಲ್ಲಿ ಜೆಡಿಎಸ್ ನಾಯಕ, ನಾಗಮಂಗಲ ಮಾಜಿ ಶಾಸಕ ಸುರೇಶ್ ಗೌಡ ಅವರು…
ಬಹುಭಾಷಾ ನಟ ಫಾಹದ್ ಫಾಸಿಲ್ ಪುಷ್ಪ ಸಿನಿಮಾದಿಂದ ನನ್ನ ಜೀವನ ಬದಲಾಗಿಲ್ಲ, ಪುಷ್ಪ ಮಾಡಿದ್ದಕ್ಕೆ ನನಗೇನು ಸಿಕ್ತು ಅನ್ನೋದು ತಪ್ಪು…