ಹಲವು ರೀತಿಯ ಪಲಾವ್ ಗಳನ್ನು ಮಾಡಿದವರು ಬೇಬಿ ಕಾರ್ನ್ ಪಲಾವ್ ಮಾಡಲು ಪ್ರಯತ್ನ ಪಡಬಹುದಾಗಿದೆ. ವಿಭಿನ್ನ ರುಚಿಯ ಈ ಪಲಾವ್ ಖುಷಿಕೊಡಬಹುದು.
ಬೇಕಾಗುವ ಪದಾರ್ಥಗಳು: ಎಣ್ಣೆ- ಸ್ವಲ್ಪ, ಬಾಸುಮತಿ ಅಕ್ಕಿ- 1ಕಪ್, ಈರುಳ್ಳಿ-2, ಬೇಬಿಕಾರ್ನ್ -6, ಬಟಾಣಿ-1ಚಿಕ್ಕ ಕಪ್, ಮೆಣಸಿನ ಕಾಯಿ- 5, ಖಾರದಪುಡಿ-1ಚಮಚ, ಬೆಳ್ಳುಳ್ಳಿ ಶುಂಠಿಪೇಸ್ಟ್- 1ಚಮಚ, ಚಕ್ಕೆ-1, ಲವಂಗ-3, ಏಲಕ್ಕಿ ಪುಡಿ- ಚಿಟಿಕೆ, ಪಲಾವ್ ಎಲೆ- ಸ್ವಲ್ಪ, ದನಿಯಾಪುಡಿ- 1ಚಮಚ, ಜೀರಿಗೆಪುಡಿ-1ಚಮಚ, ಗರಂಮಸಾಲೆ-1ಚಮಚ, ಪುದಿನಾ- ಸ್ವಲ್ಪ, ಕೊತ್ತಂಬರಿ- ಸ್ವಲ್ಪ,
ತಯಾರಿ ಮಾಡುವ ವಿಧಾನ: ಮೊದಲಿಗೆ ಅಕ್ಕಿಯನ್ನು ತೊಳೆದಿಟ್ಟುಕೊಳ್ಳಿ. ಈರುಳ್ಳಿಯನ್ನು ಉದ್ದುದ್ದವಾಗಿ ಕತ್ತರಿಸಿಕೊಳ್ಳಿ. ಆ ನಂತರ ಬಾಣಲೆಯಲ್ಲಿ ಎಣ್ಣೆ ಹಾಕಿ ಅದರಲ್ಲಿ ಬೇಬಿ ಕಾರ್ನ್ ಕೆಂಪಗೆಯಾಗುವರೆಗೆ ಹುರಿದು ಬಳಿಕ ಬೇರೆ ಪಾತ್ರೆಯಲ್ಲಿ ಹಾಕಿಟ್ಟುಕೊಳ್ಳಿ.
ಕುಕ್ಕರ್ನಲ್ಲಿ ಎಣ್ಣೆ ಹಾಕಿ ಅದರಲ್ಲಿ ಈರುಳ್ಳಿ ಹಾಕಿ ಕೆಂಬಣ್ಣ ಬರುವ ತನಕ ಹುರಿಯಿರಿ ಅದಕ್ಕೆ ಬೆಳ್ಳುಳ್ಳಿ ಶುಂಠಿಪೇಸ್ಟ್, ಹಸಿ ಮೆಣಸಿನಕಾಯಿ, ಬಟಾಣಿ ಹಾಕಿ ಹುರಿಯಿರಿ, ಬಳಿಕ ಖಾರದ ಪುಡಿ, ಜೀರಿಗೆಪುಡಿ, ಗರಂಮಸಾಲೆ, ದನಿಯಾ ಪುಡಿಗಳನ್ನು ಹಾಕಬೇಕು. ನಂತರ ಬೇಬಿಕಾರ್ನ್ ಹಾಗೂ ಅಕ್ಕಿಯನ್ನು ಹಾಕಿ ಅಗತ್ಯವಿದ್ದಷ್ಟು ನೀರು ಹಾಕಿ ಎರಡು ವಿಶಲ್ ಬೇಯಿಸಿ. ಇದಾದ ಬಳಿಕ ಚೆನ್ನಾಗಿ ಮಿಕ್ಸ್ ಮಾಡಿ ಅದರ ಮೇಲೆ ಚಿಕ್ಕದಾಗಿ ಕತ್ತರಿಸಿದ ಪುದಿನಾ ಮತ್ತು ಕೊತ್ತಂಬರಿ ಸೊಪ್ಪನ್ನು ಉದುರಿಸಿ ಬಿಡಿ. ಸೇವಿಸಲು ಬೇಬಿ ಕಾರ್ನ್ ಪಲಾವ್ ರೆಡಿ.
ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಗಾಯತ್ರಿ ಬಡಾವಣೆಯ ಮನೆಯಲ್ಲಿ ಅತಿಥಿ ಉಪನ್ಯಾಸಕಿಯೂಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಲೈಂಗಿಕ ಹಗರಣ ಆರೋಪದಲ್ಲಿ ಸಂತ್ರಸ್ತ ಮಹಿಳೆಯ ಕಿಡ್ನ್ಯಾಪ್ ಕೇಸ್ನಲ್ಲಿ ಬಂಧಿತರಾಗಿರುವ ಮಾಜಿ ಶಾಸಕ ಎಚ್.ಡಿ. ರೇವಣ್ಣ ಅವರ ಜಾಮೀನು ವಿಚಾರಣೆ…
ಭಾರೀ ಕೋಲಾಹಲ ಎಬ್ಬಿಸಿರುವ ಸಂಸದ ಪ್ರಜ್ವಲ್ ರೇವಣ್ಣ ಪೆನ್ಡ್ರೈವ್ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪೊಲೀಸರೆಂದು ಹೇಳಿಕೊಂಡು ಬಂದಿರುವ…
ಎಳನೀರು ನೂರು ರೋಗಗಳಿಗೆ ಒಂದೇ ಔಷಧಿ ಎಂಬುದು ಬಹಳಷ್ಟು ಮಂದಿಗೆ ತಿಳಿದಿಲ್ಲ. ಎಳನೀರಿನಲ್ಲಿ ಅಧಿಕ ವಿಟಮಿನ್ ಹಾಗೂ ಖನಿಜವನ್ನು ಒಳಗೊಂಡಿದೆ.…
ಇಂದು ತಮಿಳುನಾಡಿನ ಶಿವಕಾಶಿ ಸಮೀಪದ ಸೆಂಗಮಲಪಟ್ಟಿಯಲ್ಲಿರುವ ಪಟಾಕಿ ಘಟಕದಲ್ಲಿ ಸ್ಫೋಟ ಸಂಭವಿಸಿದ್ದು, ಎಂಟು ಕಾರ್ಮಿಕರು ಸಾವನ್ನಪ್ಪಿದ್ದಾರೆ.
ರಾಜ್ಯಾದ್ಯಂತ ಇಂದು ಬೆಳಗ್ಗೆ ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟಗೊಂಡಿದೆ. ಆದರೆ, ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಮಂಡ್ಯ ವಿದ್ಯಾರ್ಥಿ ಲಿಖಿತ್ ಫೇಲ್ ಆಗಿದ್ದಕ್ಕೆ ಮನನೊಂದು…