ಸಂಜೆ ಚಹಾದ ಜೊತೆ ತಿನ್ನಲು ಅಥವಾ ಬಾಯಿ ಆಡಿಸಲು ಏನಾದರು ಖಾರ ಖಾರವಾಗಿ ಸಿಕ್ಕರೆ ಅದರಷ್ಟು ಸಂತೋಷ ಮತ್ತೆಲ್ಲಿದೆ. ಅದೇ ಸಂತೋಷವನ್ನು ಹೆಚ್ಚುಮಾಡುವಲ್ಲಿ ಮಿಕ್ಸ್ಚರ್ ನ ಪಾತ್ರ ಮಹತ್ವದಾಗಿದೆ. ನಾವು ಈ ಮಿಕ್ಸ್ಚರ್ ಅನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸಿಕೊಳ್ಳಬಹುದು, ಅದು ಹೀಗೆ
ಬೇಕಾಗುವ ಪದಾರ್ಥಗಳು :
ಅವಲಕ್ಕಿ, ಗೇರುಬೀಜ, ಕೊಬ್ಬರಿ, ಕಡಲೆ ಹಿಟ್ಟು, ಕರಿಬೇವು, ಕಡಲೆ ಬೇಳೆ, ಕಡ್ಲೆಕಾಯಿ ಬೀಜ, ಮೆಣಸಿನ ಕಾಯಿ ಪುಡಿ, ಇಂಗು, ಕೊಬ್ಬರಿ ಎಣ್ಣೆ, ಸಕ್ಕರೆ, ಒಣಮೆಣಸು, ಉದ್ದಿನ ಬೇಳೆ , ಸಾಸಿವೆ, ಕೊಬ್ಬರಿ ಎಣ್ಣೆ ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ :
ಕಡಲೆ ಹಿಟ್ಟನ್ನು ಜರಡಿ ಹಿಡಿದು ಉಪ್ಪು ಹಾಕಿ ಗಟ್ಟಿಯಾಗಿ ಕಲಸಿ ಸ್ವಲ್ಪ ಹಿಟ್ಟಿನಲ್ಲಿ ಕಾರದಕಡ್ಡಿ, ಸೇಮೆ, ಚಕ್ಕುಲಿಯ ಅಚ್ಚುಗಳಲ್ಲಿ ಹಾಕಿ ಒತ್ತಿ ಎಣ್ಣೆಯಲ್ಲಿ ಕರಿದುಕೊಳ್ಳಿ. ಮತ್ತೆ ಅದೇ ಹಿಟ್ಟಿಗೆ ನೀರು ಸೇರಿಸಿ ಸ್ವಲ್ಪ ತೆಳ್ಳಗೆ ಮಾಡಿ ಬೂಂದಿ ಮಾಡಿಕೊಳ್ಳಿ. ನಂತರ ಅವಲಕ್ಕಿ, ಕರಿಬೇವು, ಗೇರುಬೀಜ, ಕಡಲೆ ಬೇಳೆ, ಕಡ್ಲೆ ಬೀಜ, ಕೊಬ್ಬರಿ ಎಲ್ಲವನ್ನು ಬೇರೆ ಬೇರೆಯಾಗಿ ಎಣ್ಣೆಯಲ್ಲಿ ಹುರಿದುಕೊಳ್ಳಿ. ನೆನಪಿರಲಿ ಒಂದೊಂದೇ ಸಾಮನು ಎಣ್ಣೆಯಿಂದ ತೆಗೆದು ಹಾಕಿದ ಕೂಡಲೆ ಅದಕ್ಕೆ ಉಪ್ಪು, ಸಕ್ಕರೆ, ಮೆಣಸಿ ಪುಡಿ ಹಾಕಿ ಬೆರಸಿಕೊಳ್ಳುತ್ತಿರಬೇಕು.
ನಂತರ ಉದ್ದಿನಬೇಳೆ, ಸಾಸಿವೆ, ಮೆಣಸು ಹಾಕಿ ಒಗ್ಗರಣೆ ಮಾಡಿ ಇಂಗು ಸ್ವಲ್ಪ ಸೇರಿಸಿ ಎಣ್ಣೆಯಲ್ಲಿ ಹುರಿದಕೊಂಡ ವಸ್ತುಗಳಿಗೆ ಬೆರೆಸಿದರೆ ಮಿಕ್ಸ್ಚರ್ ರೆಡಿಯಾಗುತ್ತದೆ. ಇದರ ಜೊತೆಗೆ ಆಲೂಗಡ್ಡೆಯ ಚಿಪ್ಸ್ಗಳನ್ನು ಕೂಡ ಸೇರಿಸಿಕೊಳ್ಳಬಹುದು.
ಪ್ರಜ್ವಲ್ ರೇವಣ್ಣನನ್ನು ಹುಡುಕಿಕೊಟ್ಟವರಿಗೆ ಒಂದು ಲಕ್ಷ ರೂ. ಬಹುಮಾನ ನೀಡುವುದಾಗಿ ಪೋಸ್ಟರ್ ಅಂಟಿಸಿದ್ದ ಜನತಾ ಪಕ್ಷದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ…
ಭಾರತದ ಮುಸ್ಲಿಮರ ಜನಸಂಖ್ಯೆ ತೋರಿಸಲು ಸುವರ್ಣ ನ್ಯೂಸ್ ಪಾಕಿಸ್ತಾನ ಧ್ವಜದ ಗ್ರಾಫಿಕ್ಸ್ ಬಳಸಿದ್ದು, ಭಾರೀ ಜನಾಕ್ರೋಶಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ…
ಕಾಂತಾರ ಚಿತ್ರದಲ್ಲಿ ಸಣ್ಣ ಪಾತ್ರ ಮಾಡುವ ಮೂಲಕ ಗಮನ ಸೆಳೆದಿದ್ದ ಯುವ ನಟ ಸೂಚನ್ ಶೆಟ್ಟಿ ಅವರು ಹೊಸ ಸಾಹಸಕ್ಕೆ…
ತೇರಿನ ಚಕ್ರಕ್ಕೆ ವ್ಯಕ್ತಿಯೋರ್ವ ಸಿಲುಕಿ ಸಾವನ್ನಪ್ಪಿರುವ ಘಟನೆ ಅಣ್ಣಿಗೇರಿ ತಾಲೂಕಿನ ಮಜ್ಜಿಗುಡ್ಡ ಗ್ರಾಮದಲ್ಲಿ ಸಂಭವಿಸಿದೆ.
ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ತಾಲ್ಲೂಕು ಆಡಳಿತದಿಂದ ಜಗಜ್ಯೋತಿ ಬಸವೇಶ್ವರ ಹಾಗೂ ಮಹಾನಸಾದ್ವಿ ಹೇಮರೆಡ್ಡಿ ಮಲ್ಲಮ್ಮನವರ ಭಾವಚಿತ್ರಕ್ಕೆ ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗಣ್ಣವರವರು…
ನಂಜನಗೂಡು ತಾಲ್ಲೂಕಿನ ಬದನವಾಳು ಗ್ರಾಮದಲ್ಲಿ ಸಂಸದ ದಿವಂಗತ ವಿ. ಶ್ರೀನಿವಾಸ್ ಪ್ರಸಾದ್ ಅವರ ನುಡಿ ನಮನ ಕಾರ್ಯಕ್ರಮದಲ್ಲಿ ಪ್ರಸಾದ್ ನೆನೆದು…