ಗರಿ ಗರಿಯಾದ ಉಂಡಲಕಾಳು ಮಾಡುವ ಸುಲಭ ವಿಧಾನ

ಮಳೆಗಾಲದಲ್ಲಿ ಚಹಾದ ಜೊತೆಗೆ ಬಿಸಿ ಬಿಯಾಗಿ ಏನಾದರು ತಿನ್ನಲು ಸಿಕ್ಕರೆ ಎಷ್ಟೊಂದು ಮಜವಾಗಿರುತ್ತದೆ. ಮಳೆಗಾಲಕ್ಕೆಂದೆ ತೆಗೆದಿಟ್ಟ ಉಪ್ಪುನೀರಿನ ಹಲಸಿನಕಾಯಿ ಸೊಳೆಯಿಂದ ಗರಿ ಗರಿಯಾದ ಉಂಡಲಕಾಳನ್ನು ಮಾಡಬಹುದು. ಅದರ ಸುಲಭ ವಿಧಾನ ಹೀಗಿದೆ…..

ಬೇಕಾಗುವ ಪದಾರ್ಥಗಳು :

• 2ಲೀಟರ್ ಉಪ್ಪಿನಲ್ಲಿ ಹಾಕಿಟ್ಟ ಹಲಸಿನಕಾಯಿ ತೊಳೆ

• ಎಣ್ಣೆ – 1/2 ಲೀ

• ಬೆಳ್ತಿಗೆ ಅಕ್ಕಿ – 1 ಕಪ್ಪ್

• ತೆಂಗಿನಕಾಯಿ ತುರಿ – 1/2 ಹೋಳು

• ಸ್ವಲ್ಪ ಜೀರಿಗೆ

• ರುಚಿಗೆ ತಕ್ಕಷ್ಟು ಉಪ್ಪು

ಮಾಡುವ ವಿಧಾನ :

ಉಪ್ಪಿನ್ನಲ್ಲಿ ಹಾಕಿಟ್ಟ ಹಲಸಿನಕಾಯಿ ತೊಳೆನ್ನ ತೆಗೆದು ಚೆನ್ನಾಗಿ ತೊಳೆಯಬೇಕು. ನೀರನ್ನು ಹಾಕಿಟ್ಟು ಆಗಾಗಾ ನೀರನ್ನು ಬದಲಾಯಿಸುತ್ತಿರಬೇಕು. ತೊಳೆಯಲ್ಲಿನ ಉಪ್ಪು ಹದಕ್ಕೆ ಬಂದ ಮೇಲೆ, ನೀರಿನಿಂದ ತೆಗೆದು ಸರಿಯಾಗಿ ಹಿಂಡಿಕೊಳ್ಳ ಬೇಕು. ಗಂಟೆ ನೆನೆಸಿಟ್ಟ ಅಕ್ಕಿಯನ್ನು ತೊಳೆದು ಅದಕ್ಕೆ ಹಲಸಿನಕಾಯಿ ತೊಳೆ, ತೆಂಗಿನ ತುರಿ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಹಿಟ್ಟನ್ನು ಗಟ್ಟಿಯಾಗಿ ರುಬ್ಬಿಕೊಳ್ಳಿ. ರುಬ್ಬಿದ ಮಿಶ್ರಣಕ್ಕೆ ಸ್ವಲ್ಪ ಜೀರಿಗೆ ಸೇರಿಸಿ ಕಲಸಿಕೊಳ್ಳಿ. ನಂತರ ಸಣ್ಣ ಸಣ್ಣ ನೆಲ್ಲಿಕಾಯಿ ಗಾತ್ರದ ಉಂಡೆಗಳನ್ನಾಗಿ ಮಾಡಿಕೊಳ್ಳಬೇಕು.

ಬಾಣಲೆಯಲ್ಲಿ ಎಣ್ಣೆ ಇಟ್ಟು ಅದು ಕಾದ ನಂತರ ಉಂಡೆಗಳನ್ನು ಹಾಕ ಬೇಕು. ಎಣ್ಣೆಯಲ್ಲಿ ಹಕಿದ ಕೂಡಲೇ ಮಗುಚಬಾರದು. ಸ್ವಲ್ಪ ಹೊತ್ತಿನ ನಂತರ ಮಗುಚಬೇಕು ಇಲ್ಲವಾದಲ್ಲಿ ಇಟ್ಟು ಸೌಟಿಗೆ ಅಂಟಿಕೊಳ್ಳಬಹುದು. ಸ್ವಲ್ಪ ಸಮಯದ ವರೆಗೂ ಎಣ್ಣೆಯಲ್ಲಿ ಹುರಿದು ಕೆಂಪಗೆ ಆದ ನಂತರ ಎಣ್ಣೆಯ ಅಂಶವನು ತೆಗೆದು ಗಾಳಿ ಆಡದ ಡಬ್ಬದಲ್ಲಿಟ್ಟರೆ ಎರಡರಿಂದ ಮೂರು ತಿಂಗಳವರಗೂ ಕೆಡುವುದಿಲ್ಲ.

Ashika S

Recent Posts

ಯುಎಇ ರಾಯಲ್‌ ಮನೆತನದ ಸದಸ್ಯನ ನಿಗೂಢ ಸಾವು

ಯುನೈಟೆಡ್ ಅರಬ್ ಎಮಿರೇಟ್ಸ್‌ನ  ರಾಯಲ್ ಮನೆತನದ ಸದಸ್ಯ ಶೇಖ್ ಹಝಾ ಬಿನ್ ಸುಲ್ತಾನ್ ಬಿನ್ ಜಾಯೆದ್ ಅಲ್ ನಹ್ಯಾನ್ ನಿಗೂಢವಾಗಿ…

11 mins ago

ಬಸವ ಜಯತಿಯ ಅಂಗವಾಗಿ ಆದಿವಾಸಿ ಮಕ್ಕಳಿಗೆ ಹಣ್ಣು-ಹಂಪಲು ವಿತರಣೆ

ಮದರ ತೆರೆಸಾ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್ ಹಾಗೂ ನವೀನ ಪಬ್ಲಿಕ್ ಸ್ಕೂಲ್ ವತಿಯಿಂದ ಬೀದರ ನಗರದ ನೌಬಾದ ಹತ್ತಿರ…

35 mins ago

ಗೃಹಪ್ರವೇಶ ಕಾರ್ಯಕ್ರಮದ ಊಟ ಸೇವಿಸಿ 28 ಕ್ಕೂ ಹೆಚ್ಚು ಜನ ಅಸ್ವಸ್ಥ

ರಾಮನಗರ ತಾಲೂಕಿನ ಕನ್ನಮಂಗಲದೊಡ್ಡಿ ಗ್ರಾಮದಲ್ಲಿ‌ ಗೃಹಪ್ರವೇಶ ಕಾರ್ಯಕ್ರಮದ ಊಟ ಸೇವಿಸಿ 28 ಕ್ಕೂ ಹೆಚ್ಚು ಜನ ಅಸ್ವಸ್ಥರಾದ ಘಟನೆ  ನಡೆದಿದೆ.

50 mins ago

ಮಡಿಕೇರಿ ಜಿಲ್ಲಾಡಳಿತದಿಂದ ಬಸವೇಶ್ವರರ ಹಾಗೂ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ

ನಾಡಿನ ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವೇಶ್ವರರ ಮತ್ತು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಅವರ ಜಯಂತಿಯನ್ನು ಜಿಲ್ಲಾಡಳಿತ ವತಿಯಿಂದ ಶುಕ್ರವಾರ ಸರಳವಾಗಿ…

2 hours ago

ಗುಂಡ್ಲುಪೇಟೆ: ವಿಷಕಾರಿ ಸೊಪ್ಪು ಸೇವಿಸಿ 10 ಕುರಿಗಳು ಸಾವು

ವಿಷಕಾರಿ ಸೊಪ್ಪು ಸೇವಿಸಿ 10 ಕುರಿಗಳು ಸಾವನ್ನಪ್ಪಿರುವ ಘಟನೆ ತಾಲೂಕಿನ ಮಲ್ಲಯ್ಯನಪುರ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

3 hours ago

ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಹಿಂದಿನ ಶಕ್ತಿ ಬಹಿರಂಗವಾಗಲಿ: ಮಹೇಶ್ ಟೆಂಗಿನಕಾಯಿ

ಪ್ರಜ್ವಲ್ ಪ್ರಕರಣದಲ್ಲಿ ಪೆನ್ ಡ್ರೈವ್ ಹಿಂದಿನ ಶಕ್ತಿ ಬಹಿರಂಗವಾಗಲಿ' ಎಂದು ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ…

3 hours ago