ಬೆಂಗಳೂರು: ಬಿಗ್ ಬಾಸ್ ಮನೆಯಿಂದ ವರ್ತೂರು ಸಂತೋಷ್ ಅವರು ಎಲಿಮಿನೇಟ್ ಆಗಿದ್ದಾರೆ. ಫಿನಾಲೆಯಿಂದ ಔಟ್ ಆದ ಎರಡನೇ ಸ್ಪರ್ಧಿ ಅವರಾಗಿದ್ದಾರೆ. ಜನವರಿ 27ರಂದು ತುಕಾಲಿ ಸಂತೋಷ್ ಹೊರ ಬಂದಿದ್ದರು. ಇದಾದ ಬೆನ್ನಲ್ಲೇ ವರ್ತೂರು ಸಂತೋಷ್ ಕೂಡ ಹೊರ ಬಂದರು. ಈ ಮೂಲಕ ಮನೆಯ ಸದಸ್ಯರ ಸಂಖ್ಯೆ ನಾಲ್ಕಕ್ಕೆ ಇಳಿಕೆ ಆಗಿದೆ.
“ವರ್ತೂರು ಸಂತೋಷ್ ಅವರು ಬಿಗ್ ಬಾಸ್ ಮನೆಯಲ್ಲಿ ಅಷ್ಟಾಗಿ ಗಮನ ಸೆಳೆಯಲಿಲ್ಲ. ಅವರು ಸೈಲೆಂಟ್ ಆಗಿ ಇರುತ್ತಿದ್ದುದೇ ಹೆಚ್ಚು. ಅವರು ಕತ್ತಿಗೆ ಧರಿಸಿದ್ದ ಹುಲಿ ಉಗುರಿನಿಂದ ಜೈಲಿಗೆ ಹೋದರು. ಈ ಕಾರಣಕ್ಕೆ ಅವರು ಒಂದು ವಾರ ದೊಡ್ಮನೆಯಿಂದ ಹೊರ ಇರಬೇಕಾಗಿ ಬಂದಿತ್ತು”. ಒಂದು ವಾರಕ್ಕೆ ಅವರು ಮರಳಿ ಬಿಗ್ ಬಾಸ್ ಮನೆಗೆ ಬಂದರು. ನಂತರ ಬಿಗ್ ಬಾಸ್ ಮನೆಯಲ್ಲಿ ಅವರು ಎಲ್ಲರ ಗಮನ ಸೆಳೆಯೋಕೆ ಶುರು ಮಾಡಿದರು. ಹೀಗಾಗಿ ಆಟದಲ್ಲಿ ಸ್ವಲ್ಪ ಹಿಂದೆಯೇ ಉಳಿದರು.
ಇನ್ನು ವರ್ತೂರು ಸಂತೋಷ್ ಅವರಿಗೆ ಇಷ್ಟು ದೂರ ಬಂದಿದ್ದಕ್ಕೆ ಖುಷಿ ಇದೆ. 112 ದಿನಗಳ ಕಾಲ ಅವರು ದೊಡ್ಮನೆಯಲ್ಲಿ ಕಳೆದಿದ್ದಾರೆ. ಹೀಗಾಗಿ ಅವರು ಖುಷಿಯಿಂದಲೇ ದೊಡ್ಮನೆಯಿಂದ ಹೊರಕ್ಕೆ ಬಂದಿದ್ದಾರೆ. ವೇದಿಕೆ ಮೇಲೆ ಕಿಚ್ಚ ಸುದೀಪ್ ಅವರು ಸಂತೋಷ್ಗೆ ಆಲ್ ದಿ ಬೆಸ್ಟ್ ಹೇಳಿದ್ದಾರೆ.
ಸದ್ಯ ಬಿಗ್ ಬಾಸ್ ಮನೆಯಲ್ಲಿ ವಿನಯ್ ಗೌಡ, ಕಾರ್ತಿಕ್ ಗೌಡ, ಸಂಗೀತಾ ಶೃಂಗೇರಿ, ವಿನಯ್ ಗೌಡ ಇದ್ದಾರೆ.