ತೆಲುಗು ಚಿತ್ರರಂಗದಲ್ಲಿ ವಿಷಾದನೀಯ ಸಂಗತಿ ನಡೆದಿದೆ. ಖ್ಯಾತ ನಿರ್ಮಾಪಕ ಮತ್ತು ವಿತರಕ ನಾರಾಯಣ ದಾಸ್ ನಾರಂಗ್ ಮಂಗಳವಾರ ಬೆಳಿಗ್ಗೆ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಸ್ಟಾರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಮಂಗಳವಾರ ಬೆಳಗ್ಗೆ 9.04ಕ್ಕೆ ನಿಧನರಾದರು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ನಾರಾಯಣ ದಾಸ್ ನಾರಂಗ್ ಅವರು ಅನೇಕ ಯಶಸ್ವಿ ಚಲನಚಿತ್ರಗಳನ್ನು ನಿರ್ಮಿಸಿದ್ದಾರೆ. ವಿತರಕರಾಗಿಯೂ ಹಲವಾರು ಚಿತ್ರಗಳನ್ನು ಬಿಡುಗಡೆ ಮಾಡಿದ್ದಾರೆ. ತೆಲುಗು ಫಿಲ್ಮ್ ಚೇಂಬರ್ ಅಧ್ಯಕ್ಷರಾಗಿ. ಏಷ್ಯನ್ ಗ್ರೂಪ್ನ ಮುಖ್ಯಸ್ಥರಾಗಿ, ಗ್ಲೋಬಲ್ ಸಿನಿಮಾದ ಸಂಸ್ಥಾಪಕರಾಗಿ ಉದ್ಯಮದಲ್ಲಿ ಉತ್ತಮ ಖ್ಯಾತಿಯನ್ನು ಹೊಂದಿದ್ದಾರೆ.
ಅವರ ನಿಧನದ ಸುದ್ದಿ ತಿಳಿದ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ, ಸೂಪರ್ ಸ್ಟಾರ್ ಮಹೇಶ್ ಬಾಬು, ಪವರ್ ಸ್ಟಾರ್ ಜನಸೇನಾ ಪಕ್ಷದ ಅಧ್ಯಕ್ಷ ಪವನ್ ಕಲ್ಯಾಣ್ ಮತ್ತು ಇತರೆ ಸಿನಿ ತಾರೆಯರು ನಾರಾಯಣ ದಾಸ್ ನಾರಂಗ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಇಂದು ಸಂಜೆ 4 ಗಂಟೆಗೆ ಜುಬ್ಲಿ ಹಿಲ್ಸ್ನ ಮಹಾ ಪ್ರಸ್ಥಾನದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
Shocked and saddened by the demise of #NarayanDasNarang garu. A prolific figure in our film industry.. his absence will be deeply felt. A privilege to have known and worked with him. pic.twitter.com/SLe1OCCOeZ
— Mahesh Babu (@urstrulyMahesh) April 19, 2022