News Karnataka Kannada
Friday, May 03 2024
ಮನರಂಜನೆ

ಪ್ರವಾಹ ಪೀಡಿತ ಮನಾಲಿಯಿಂದ ಮುಂಬೈಗೆ ನಟ ರುಸ್ಲಾನ್‌

Actor Ruslaan from flood-hit Manali to Mumbai
Photo Credit : IANS

ಮುಂಬೈ: ಪ್ರವಾಹ ಮತ್ತು ಭೂಕುಸಿತದಿಂದ ಜರ್ಝರಿತವಾಗಿರುವ ಮನಾಲಿಯಲ್ಲಿ ನಟ ರುಸ್ಲಾನ್ ಮುಮ್ತಾಜ್ ಸಿಲುಕಿಕೊಂಡಿದ್ದು, ಕೊನೆಗೂ ಮುಂಬೈನಲ್ಲಿರುವ ಮನೆಗೆ ತಲುಪಿದ್ದಾರೆ.

ರುಸ್ಲಾನ್ ಈ ಬಗ್ಗೆ ಇನ್‌ಸ್ಟಾದಲ್ಲಿ ಬರೆದುಕೊಂಡಿದ್ದು, ಮುಂಬೈ ವಿಮಾನ ನಿಲ್ದಾಣಕ್ಕೆ ವಾಪಸಾಗಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ಅಲ್ಲದೆ ಬ್ಯಾಕ್‌ ಟು ಮುಂಬೈ ಎಂದು ಟ್ಯಾಗ್‌ ಮಾಡಿದ್ದಾರೆ.  ಮನಾಲಿಯಲ್ಲಿ ರೆಸಾರ್ಟ್ ಪ್ರದೇಶವೊಂದರ ಬಾಲ್ಕನಿಯ ಚಿತ್ರವೊಂದನ್ನು ಹಂಚಿಕೊಂಡಿದ್ದು, ಅದರ ಪಕ್ಕದಲ್ಲಿರುವ ನದಿಯ ಭೀಕರ ಪ್ರವಾಹಕ್ಕೆ ತುತ್ತಾಗಿರುವ ‌ದೃಶ್ಯಗಳಿವೆ.

ರುಸ್ಲಾನ್ ಈ ಹಿಂದೆ ರೆಸಾರ್ಟ್‌ನ ಮಾಲೀಕರೊಂದಿಗೆ ಚಿತ್ರವನ್ನು ಹಂಚಿಕೊಂಡಿದ್ದರು, ಅವರನ್ನು ಅವರು “ನಿಜ ಜೀವನದ ನಾಯಕ” ಎಂದು ಕರೆದಿದ್ದರು. ರೆಸಾರ್ಟ್‌ ಮಾಲೀಕ “ನಕುಲ್ ಮಹಂತ್ ನಿಜ ಜೀವನದ ಹೀರೋ. ಅವರು ಪ್ರವಾಹದಲ್ಲಿ ಅತ್ಯಮೂಲ್ಯ ಆಸ್ತಿಯನ್ನು ಕಳೆದುಕೊಂಡಿರುವ ಬಗ್ಗೆ ಚಿಂತಿಸದೇ ಅತಿಥಿಗಳ ಸುರಕ್ಷತೆಗೆ ಮೊದಲ ಆದ್ಯತೆ ನೀಡಿದ್ದು, ನಮ್ಮ ಶೂಟಿಂಗ್‌ ಸಿಬ್ಬಂದಿ ಸೇರಿದಂತೆ 40 ಜನರನ್ನು ಸುರಕ್ಷಿತ ಸ್ಥಳಕ್ಕೆ ತಲುಪಿಸಿದ್ದಾರೆ ಎಂದು ಬರೆದುಕೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು