ಮುಂಬೈ: ಪ್ರವಾಹ ಮತ್ತು ಭೂಕುಸಿತದಿಂದ ಜರ್ಝರಿತವಾಗಿರುವ ಮನಾಲಿಯಲ್ಲಿ ನಟ ರುಸ್ಲಾನ್ ಮುಮ್ತಾಜ್ ಸಿಲುಕಿಕೊಂಡಿದ್ದು, ಕೊನೆಗೂ ಮುಂಬೈನಲ್ಲಿರುವ ಮನೆಗೆ ತಲುಪಿದ್ದಾರೆ.
ರುಸ್ಲಾನ್ ಈ ಬಗ್ಗೆ ಇನ್ಸ್ಟಾದಲ್ಲಿ ಬರೆದುಕೊಂಡಿದ್ದು, ಮುಂಬೈ ವಿಮಾನ ನಿಲ್ದಾಣಕ್ಕೆ ವಾಪಸಾಗಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ಅಲ್ಲದೆ ಬ್ಯಾಕ್ ಟು ಮುಂಬೈ ಎಂದು ಟ್ಯಾಗ್ ಮಾಡಿದ್ದಾರೆ. ಮನಾಲಿಯಲ್ಲಿ ರೆಸಾರ್ಟ್ ಪ್ರದೇಶವೊಂದರ ಬಾಲ್ಕನಿಯ ಚಿತ್ರವೊಂದನ್ನು ಹಂಚಿಕೊಂಡಿದ್ದು, ಅದರ ಪಕ್ಕದಲ್ಲಿರುವ ನದಿಯ ಭೀಕರ ಪ್ರವಾಹಕ್ಕೆ ತುತ್ತಾಗಿರುವ ದೃಶ್ಯಗಳಿವೆ.
ರುಸ್ಲಾನ್ ಈ ಹಿಂದೆ ರೆಸಾರ್ಟ್ನ ಮಾಲೀಕರೊಂದಿಗೆ ಚಿತ್ರವನ್ನು ಹಂಚಿಕೊಂಡಿದ್ದರು, ಅವರನ್ನು ಅವರು “ನಿಜ ಜೀವನದ ನಾಯಕ” ಎಂದು ಕರೆದಿದ್ದರು. ರೆಸಾರ್ಟ್ ಮಾಲೀಕ “ನಕುಲ್ ಮಹಂತ್ ನಿಜ ಜೀವನದ ಹೀರೋ. ಅವರು ಪ್ರವಾಹದಲ್ಲಿ ಅತ್ಯಮೂಲ್ಯ ಆಸ್ತಿಯನ್ನು ಕಳೆದುಕೊಂಡಿರುವ ಬಗ್ಗೆ ಚಿಂತಿಸದೇ ಅತಿಥಿಗಳ ಸುರಕ್ಷತೆಗೆ ಮೊದಲ ಆದ್ಯತೆ ನೀಡಿದ್ದು, ನಮ್ಮ ಶೂಟಿಂಗ್ ಸಿಬ್ಬಂದಿ ಸೇರಿದಂತೆ 40 ಜನರನ್ನು ಸುರಕ್ಷಿತ ಸ್ಥಳಕ್ಕೆ ತಲುಪಿಸಿದ್ದಾರೆ ಎಂದು ಬರೆದುಕೊಂಡಿದ್ದಾರೆ.