News Karnataka Kannada
Thursday, May 09 2024
ಮನರಂಜನೆ

ಬಿಗ್ ಬಾಸ್ ಶೋ ನಲ್ಲಿ ಉಪ್ಪಿ ಮನದ ಮಾತು

Photo Credit :

ಬಿಗ್ ಬಾಸ್ ಶೋ ನಲ್ಲಿ ಉಪ್ಪಿ ಮನದ ಮಾತು

ಬಿಗ್ ಬಾಸ್ 3 ಸೂಪರ್ ಸಂಡೆ ವಿತ್ ಸುದೀಪ್  ಕಾರ್ಯಕ್ರಮದಲ್ಲಿ ಉಪೇಂದ್ರ ಅವರು ತಮ್ಮ ಜೀವನದ ಪಯಣವನ್ನು ಬಿಚ್ಚಿಟ್ಟರು. ತಮ್ಮ ಸಿನಿ ಜೀವನದ ಕಥೆಯನ್ನೇ ಎಳೆ ಎಳೆಯಾಗಿ ವಿವರಿಸಿದರು.

ಸ್ಯಾಂಡಲ್ ವುಡ್ ನ ರಿಯಲ್ ಸ್ಟಾರ್ ಉಪ್ಪಿ ಅವರು ಜೀವನದಲ್ಲಿ ಎದುರಿಸಿದ ಕಷ್ಟ, ಸುಖ ಎಲ್ಲವನ್ನು ಬಿಗ್ ಬಾಸ್ ಮನೆಯಲ್ಲಿ ಬಿಚ್ಚಿಟ್ಟರು. ತಮ್ಮ ಜೀವನ, ಪ್ರೀತಿ, ಸಿನಿಮಾ, ಮದುವೆ, ಹೆಂಡ್ತಿ, ಮಕ್ಕಳು, ಜನ, ಅವರ ಪ್ರೀತಿ ಹೀಗೆ ಎಲ್ಲದರ ಕುರಿತು ಉಪ್ಪಿ ಅವರು ಮನಮುಟ್ಟುವ ಹಾಗೆ ಮಾತನಾಡಿದ್ರು. ಮೊದಲಿಗೆ ತಾವು 7ನೇ ತರಗತಿಯಲ್ಲಿರುವಾಗ ಕಾಂಪೌಂಡರ್‌ ಗುಂಡಾ ನಾಟಕದಲ್ಲಿ ನಾಯಕನಾಗಿ ಅಭಿನಯಿಸಿದ ಕ್ಷಣದಿಂದ ಉಪ್ಪಿ ತಲೆಗೆ ಹಿರೋ ಆಗುವ ಹುಚ್ಚು ಹತ್ತಿತ್ತಂತೆ. ನಂತರ ಹೋಗಿದ್ದು ಕಾಶಿನಾಥ್‌ ಅವರ ಬಳಿ. ಅವರ ಗರಡಿಯಲ್ಲೇ ಬೆಳೆದ ಉಪ್ಪಿಗೆ ನಂತರ ಕಾಶಿನಾಥ್‌ ನಿರ್ದೇಶನದ ಸಿನಿಮಾವೊಂದರಲ್ಲಿ ನಾಯಕನಾಗಿ ನಟಿಸುವ ಅವಕಾಶ ಸಿಕ್ತಂತೆ.

ಬಳಿಕ ನಾನು ನಿರ್ದೇಶಕನಾಗಿ ಕೆರಿಯರ್‌ ಪ್ರಾರಂಭಿಸುವ ಮೊದಲು ಹತ್ತು ವರ್ಷ ಮನೆಗೆ ಹೋಗ್ತಿರಲಿಲ್ಲ. ಸಹ ನಿರ್ದೇಶಕರೊಂದಿಗೆ ಕಥೆಯ ಬಗ್ಗೆ ಸಿನಿಮಾದ ಬಗ್ಗೆ ಆಲೋಚಿಸುತ್ತಾ.. ಅದೇ ಕೆಲಸದಲ್ಲಿ ಬ್ಯುಸಿಯಾಗಿದ್ದೆ ಅಂತಾ ಹೇಳಿದ್ರು.

ಉಪೇಂದ್ರ ಅವರ ಲವ್‌‌ ಸ್ಟೋರಿ ಕೂಡಾ ಚರ್ಚೆಗೆ ಬಂತು. ಇವ್ರಿಗೆ ಇಂಗ್ಲೀಷ್‌ ಬರಲ್ಲ, ಅವ್ರಿಗೆ ಇಂಗ್ಲೀಷ್‌ ಬಿಟ್ರೆ ಬೇರೆ ಬರೋಲ್ಲ. ನಿಮ್ಮ ಲವ್‌ ಹೇಗಾಯ್ತು ಎಂದು ಸುದೀಪ್‌ ಉಪೇಂದ್ರರ ಕಾಲೆಳೆದರು. ಆಗ ಉಪ್ಪಿ, ಪ್ರೀತಿಗೆ ಭಾಷೆ ಅಗತ್ಯವಿಲ್ಲ. ನಾವು ಬೇರೆಯವರಿಂದ ಪ್ರೀತಿ ಬಯಸುವ ಬದಲು ನಾವೇ ಪ್ರೀತಿ ಕೊಟ್ರೆ ಲೈಫ್‌ ಸೂಪರ್‌ ಆಗಿರುತ್ತೆ ಅಂದ್ರು. ಇನ್ನು ಮದುವೆಯಾದ ಬಳಿಕ ವೈಫೇ ಲೈಫು. ವೈಫನ್ನ ಬಿಟ್ರೆ ಲೈಫೇ ಇಲ್ಲ ಅಂದ್ರು ಉಪ್ಪಿ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು