ಮಂಗಳೂರು: ಇತ್ತೀಚೆಗೆ ಮುಂಬಯಿಯಲ್ಲಿ ನಿಧನ ಹೊಂದಿದ್ದ ಬಾಲಿವುಡ್ ನಟಿ ಐಶ್ವರ್ಯಾ ರೈ ತಂದೆ ಕೃಷ್ಣರಾಜ್ ರೈ ಅವರ ಅಸ್ಥಿ ವಿಸರ್ಜನೆಯನ್ನು ವಿಸರ್ಜನೆಯನ್ನು ಉಪ್ಪಿನಂಗಡಿಯ ನೇತ್ರಾವತಿ-ಕುಮಾರಧಾರಾ ನದಿಗಳ ಸಂಗಮ ಸ್ಥಳದಲ್ಲಿ ನೆರವೇರಿಸಿದರು.
ಬಾಲಿವುಡ್ ಖ್ಯಾತ ನಟಿ ಐಶ್ವರ್ಯಾ ರೈ, ಪುತ್ರಿ ಆರಾಧ್ಯ, ತಾಯಿ ವೃಂದಾ, ಸಹೋದರ ಆದಿತ್ಯ ರೈ ಸೇರಿದಂತೆ ಕುಟುಂಬಸ್ಥರು ಜೊತೆಗಿದ್ದರು. ಮುಂಬಯಿಯಿಂದ ವಿಮಾನದ ಮೂಲಕ ಬೆಳಗ್ಗೆ 10.45ಕ್ಕೆ ಬಜಪೆ ಆಗಮಿಸಿದ ಅವರು ಶ್ರೀ ಕ್ಷೇತ್ರ ಕದ್ರಿ ಮತ್ತು ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದರು.
ಇಂದು ಸಂಜೆ ಮಂಗಳೂರಿನ ಖಾಸಗಿ ಹೊಟೇಲ್ನಲ್ಲಿ ತಂಗಲಿರುವ ಅವರು, ರವಿವಾರ ನಗರದ ವಿವಿಧ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಂಜೆ ವಿಮಾನದ ಮೂಲಕ ತೆರಳಲಿದ್ದಾರೆ ಎಂದು ತಿಳಿದುಬಂದಿದೆ.