ಬೆಂಗಳೂರು: ಚೆಲುವಿನ ಚಿತ್ತಾರದ ಬೆಡಗಿ ನಟಿ ಅಮೂಲ್ಯ ಜಗದೀಶ್ ಶುಕ್ರವಾರ ತನ್ನ ಹುಟ್ಟು ಹಬ್ಬವನ್ನು ಮೊದಲು ತವರು ಮನೆಯಲ್ಲಿ ಆಚರಿಸಿಕೊಂಡು ಆ ಬಳಿಕ ರಾಜರಾಜೇಶ್ವರಿ ನಗರದ ನಿವಾಸದಲ್ಲಿ ಅಭಿಮಾನಿಗಳ ಜತೆ ಎಲ್ಲರಿಗೆ ಮಾದರಿಯಾಗುವಂತೆ ಆಚರಿಸಿಕೊಂಡರು.
ಅಂದರೆ ಅಮೂಲ್ಯ ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿ ಮಹಿಳೆಯರಿಗೆ ಸ್ವಾವಲಂಬಿ ಬದುಕು ರೂಪಿಸಿಕೊಳ್ಳುವುದಕ್ಕಾಗಿ ಹೊಲಿಗೆ ಯಂತ್ರಗಳನ್ನ ವಿತರಣೆ ಮಾಡಿ ಸ್ವಾವಲಂಭಿ ಜೀವನ ಕಲ್ಪಿಸಿಕೊಳ್ಳುವಂತೆ ಸಂದೇಶವನ್ನು ಸಾರಿದ್ದಾರೆ.
ಇನ್ನೂ ಅಮೂಲ್ಯ ನಿವಾಸದ ಬಳಿ ಅಪಾರ ಅಭಿಮಾನಿಗಳು ಸೇರಿ ಗೋಲ್ಡನ್ ಕ್ವೀನ್ ಗೆ ಬರ್ತ್ ಡೇ ಶುಭಶಾಯ ಕೋರಿದರು. ಈ ವೇಳೆ ಮಾತನಾಡಿ ಅಮೂಲ್ಯ, ನಾವು ಹುಟ್ಟಿದ ದಿನವನ್ನು ಬೇರೆಯವರು ನೆನಪಿಸಕೊಳ್ಳಬೇಕು ಎಂದು ಹೇಳುವ ಪತಿ ಜಗದೀಶ್ ಅವರು ವಿಶೇಷವಾಗಿ ನನ್ನ ಬರ್ತ್ ಡೇಯನ್ನು ಆಚರಿಸಿಕೊಂಡಿದ್ದಾರೆ.
ಒಳ್ಳೆಯ ಕುಟುಂಬ, ಪ್ರೀತಿ ಸಿಕ್ಕಿದೆ. ಅಭಿಮಾನಿಗಳ ಪ್ರೀತಿಗೆ ನಾವು ಚಿರುಋಣಿಯಾಗಿದ್ದೇವೆ ಎಂದು ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.