ಚಂದವನದಲ್ಲಿ ಚೆಂದದ ಶೀರ್ಷಿಕೆಯಡಿಯಲ್ಲಿ ಸಾಲು ಸಾಲು ಚಿತ್ರಗಳು ಬಿಡುಗಡೆಯಾಗುತ್ತಿದೆ ಇದೀಗ ಆ ಸಾಲಿಗೆ ‘ಅಸತೋಮ ಸದ್ಗಮಯ’ ಚಿತ್ರವು ಸೇರ್ಪಡೆಯಾಗುತ್ತಿದೆ. ಮೊದಲ ಬಾರಿಗೆ ಮಂಗಳೂರಿನ ರಾಜೇಶ್ ವೇಣೂರ್ ನಿರ್ದೇಶನ ಹೊಣೆಯನ್ನು ಹೊತ್ತು ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
ನಿನ್ನೆ ಚಿತ್ರದ ಪೋಸ್ಟರ್ ಬಿಡುಗಡೆಯಾಗಿದ್ದು ನಿರ್ದೇಶಕರು ಹೊಸ ನಿರೀಕ್ಷೆಯೊಂದಿಗೆ ಚಿತ್ರವನ್ನು ನಿರ್ದೇಶಿಸಿದ್ದಾರೆ. ಅಶ್ವಿನ್ ಜೆ.ಪಿರೇರಾ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರಕ್ಕೆ ವಹಾಬ್ ಸಲೀಂ ಅವರ ಸಾಹಿತ್ಯವಿದೆ.
ಚಿತ್ರದಲ್ಲಿ ತಿರುವು ಕೊಡುವ ಪಾತ್ರದಲ್ಲಿ ನಟಿ ರಾಧಿಕಾ ಚೇತನ್ ಪಾತ್ರ ನಿರ್ವಹಿಸಿದ್ದಾರೆ. ಚಿತ್ರಕ್ಕೆ ಕಿಶೋರ್ ಕುಮಾರ್ ಅವರ ಕ್ಯಾಮರಾ ಕೈಚಳಕವಿದೆ. ಈಗಾಗಲೇ ಮಂಗಳೂರು, ಬೆಂಗಳೂರು, ಮಂಡ್ಯ ಕಡೆ ಚಿತ್ರೀಕರಣ ಮುಗಿಸಿದ್ದು, ಇನ್ನೂ ಸಾಹಸ ದೃಶ್ಯ ಹಾಗೂ ಹಾಡಿನ ಚಿತ್ರೀಕಣ ಬಾಕಿ ಉಳಿದಿದೆ. ಎಲ್ಲವೂ ಅಂದುಕೊಡಂತೆ ಆದರೆ ಡಿಸೆಂಬರ್ ತಿಂಗಳಿನಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎಂದು ಚಿತ್ರ ತಂಡದ ಅನಿಸಿಕೆ.