News Karnataka Kannada
Wednesday, May 01 2024
ಮನರಂಜನೆ

ನಂಬಿ ಮೋಸ ಹೋದ ನಟಿ ಸ್ನೇಹಾ: ಕೂಡಿಟ್ಟ ಹಣವೆಲ್ಲಾ ವಂಚಕರ ಪಾಲು

Latest News
Photo Credit :

ಬಹುಭಾಷಾ ನಟಿ ಸ್ನೇಹಾಗೆ ಕೂಡಿಟ್ಟ ಹಣವೆಲ್ಲಾ ವಂಚಕರ ಪಾಲಾಗಿದ್ದು, ಖದೀಮರು ಲಕ್ಷ ಲಕ್ಷ ಹಣ ದೋಖಾ ಎಸಗಿದ್ದಾರೆ.
ಕನ್ನಡದ ‘ರವಿ ಶಾಸ್ತ್ರಿ’, ‘ಕುರುಕ್ಷೇತ್ರ’ ಸಿನಿಮಾಗಳಲ್ಲಿ ನಟಿಸಿದ್ದ ಸ್ನೇಹಾ ಈ ರೀತಿ ಮೋಸಕ್ಕೆ ಒಳಗಾಗಿದ್ದಾರೆ.

ಸಿನಿಮಾಗಳಲ್ಲಿ ಸಂಭಾವನೆ ರೂಪದಲ್ಲಿ ಬಂದ ಹಣವನ್ನು ಅವರು ಹೂಡಿಕೆ ಮಾಡಿದ್ದರು. ದೊಡ್ಡ ಮೊತ್ತದ ಹಣವನ್ನು ಅವರು ಕಳೆದುಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಅವರು ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲು ಮಾಡಿದ್ದಾರೆ.
ಈಗ ಅಸಲು ಹಣವೂ ಇಲ್ಲ, ಲಾಭವೂ ಇಲ್ಲ ಎಂಬಂತಾಗಿದೆ. ಈ ಬಗ್ಗೆ ಅವರು ಚೆನ್ನೈ ಪೊಲೀಸ್​ ಠಾಣೆಯಲ್ಲಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಸ್ನೇಹಾಗೆ ಇಬ್ಬರು ಉದ್ಯಮಿಗಳ ಪರಿಚಯವಾಗಿತ್ತು. ಎಕ್ಸ್​​ಪೋರ್ಟ್​ ಉದ್ಯಮವನ್ನು ಇವರು ಹೊಂದಿದ್ದರು. ಇವರನ್ನು ನಂಬಿ ಸ್ನೇಹಾ ಲಕ್ಷಾಂತರ ರೂಪಾಯಿ ನೀಡಿದ್ದರು. ಸಮಯಕ್ಕೆ ಸರಿಯಾಗಿ ಲಾಭದ ಮೊತ್ತವನ್ನು ನೀಡುವುದಾಗಿ ಉದ್ಯಮಿಗಳು ನಂಬಿಸಿದ್ದರು. ಆದರೆ, ಈಗ ಈ ಪ್ರಾಮಿಸ್​ ಸುಳ್ಳಾಗಿದೆ. ನಟಿಗೆ ಮೋಸ ಮಾಡಲಾಗಿದೆ. ಈ ಬಗ್ಗೆ ಅವರು ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ. ಅಲ್ಲದೆ, ಉದ್ಯಮಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಅವರು ಆಗ್ರಹಿಸಿದ್ದಾರೆ.

ಸ್ನೇಹಾ ಅವರು ಹಣ ಹಿಂದಿರುಗಿಸುವಂತೆ ಕೇಳಿದ್ದಾರೆ. ಹಣ ಕೊಡುವುದಿಲ್ಲ ಎಂದು ಹೇಳಿದ್ದು ಮಾತ್ರವಲ್ಲದೆ ಕೊಲೆ ಬೆದರಿಕೆಯನ್ನು ಕೂಡ ಹಾಕಲಾಗಿದೆ. ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು