ಇತ್ತೀಚೆಗಷ್ಟೇ ಅಮೇಜಾನ್ ಪ್ರೈಂನಲ್ಲಿ ಜೈ ಭೀಮ್ ಸಿನಿಮಾ ರಿಲೀಸ್ ಆಗಿದ್ದು, ಜನರ ಮೆಚ್ಚುಗೆ ಗಳಿಸಿದೆ. ಅಂತೆಯೇ ಕೆಲವು ವಿವಾದಗಳನ್ನು ಸಿನಿಮಾ ಹುಟ್ಟಿಹಾಕಿದ್ದು, ಸಿನಿಮಾದಲ್ಲಿ ತಮಿಳುನಾಡಿನ ವನ್ನಿಯಾರ್ ಸಮುದಾಯವನ್ನು ಕೆಟ್ಟದಾಗಿ ತೋರಿಸಲಾಗಿದೆ ಎಂದು ವನ್ನಿಯಾರ್ ಸಂಘ ಕಿಡಿಕಾರಿದೆ.
ಇದೇ ವಿಷಯವಾಗಿ ತಮಿಳು ನಟ ಸೂರ್ಯ ಮೇಲೆ ಹಲ್ಲೆ ಮಾಡಿದವರಿಗೆ ಒಂದು ಲಕ್ಷ ರೂ. ನೀಡುತ್ತೇನೆ ಎಂದು ಹೇಳಿದ್ದ ಪಟ್ಟಾಳ್ ಮಕ್ಕಳ ಕಾಚಿ ಪಕ್ಷದ ಜಿಲ್ಲಾ ಕಾರ್ಯದರ್ಶಿ ಸೀತಾಮಲ್ಲಿ ಪಳನಿಸ್ವಾಮಿ ವಿರುದ್ಧ ದೂರು ದಾಖಲಾಗಿದೆ. ಇತ್ತ ಚೆನ್ನೈನಲ್ಲಿರುವ ನಟ ಸೂರ್ಯ ಮನೆ ಸುತ್ತ ಬಿಗಿ ಭದ್ರತೆ ನೀಡಲಾಗಿದೆ.