ಸೂಪರ್ ಸ್ಟಾರ್ ರಜನಿಕಾಂತ್ ಪಾಲಿಗೆ ಇಂದು ಎರಡು ಕಾರಣಗಳಿಂದ ವಿಶೇಷ ದಿನವಂತೆ. ಹೀಗಂತ ತಲೈವ್ ನೇ ಖುದ್ದು ಹೇಳಿಕೊಂಡಿದ್ದಾರೆ. ಹಾಗಿದ್ರೆ ಏನ್ ಸ್ಪೆಷಲ್ ಇರಬಹುದು ಅಂತೀರಾ?
ಅದೇನೆಂದರೆ ಕೆಲವು ದಿನಗಳ ಹಿಂದೆ ರಜನಿಕಾಂತ್ ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಣೆ ಮಾಡಲಾಗಿತ್ತು. ಸಿನಿಮಾದಲ್ಲಿನ ಸಾಧನೆಗಾಗಿ ಕೊಡಮಾಡುವ ಈ ಪ್ರತಿಷ್ಠಿತ ಪ್ರಶಸ್ತಿ. ಇಂದು ಈ ಪ್ರಶಸ್ತಿಯನ್ನು ರಜನಿ ದೆಹಲಿಯಲ್ಲಿ ಸ್ವೀಕರಿಸಲಿದ್ದಾರೆ.
ಮತ್ತೊಂದು ವಿಶೇಷವೇನೆಂದರ್ರೆ ಅವರ ಪುತ್ರಿ ಸೌಂದರ್ಯ ಲಾಂಚ್ ಮಾಡುತ್ತಿರುವ ಹೊಸ ಆಪ್ ಹೂಟೆ ಇಂದು ಲೋಕಾರ್ಪಣೆಯಾಗಲಿದೆ. ಈ ಆಪ್ ನಲ್ಲಿ ತಲೈವ ಕೂಡಾ ಧ್ವನಿ ನೀಡಿದ್ದಾರೆ. ಹಾಗಾಗಿ ಅಕ್ಟೋಬರ್ 25 ಬಹಳ ವಿಶೇಷ ದಿನವೆಂದು ರಜನಿ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ.