ಮಧುರೈ ಮೇಲೂರಿನ ದಂಪತಿ ಆರ್.ಕದಿರೇಸನ್(60 ವರ್ಷ) ಮತ್ತು ಕೆ.ಮೀನಾಕ್ಷಿ(55ವರ್ಷ) ಅವರು ತಮಿಳು ನಟ ಧನುಷ್ ನಮ್ಮ ಮಗ ಎಂದು ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು, ಈ ಹಿನ್ನೆಲೆ ನಟ ಧನುಷ್ಗೆ ನ್ಯಾಯಾಲಯಕ್ಕೆ ಹಾಜರಾಗಲು ಸಮನ್ಸ್ ಜಾರಿ ಮಾಡಿದೆ.
ಮೇಲೂರಿನ ದಂಪತಿ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು, ಚಿತ್ರರಂಗದಲ್ಲಿ ಬೆಳವಣಿಗೆ ಕಾಣುತ್ತಿದ್ದಂತೆ ನಟ ಧನುಷ್ ನಮ್ಮನ್ನು ಕಡೆಗಣಿಸಿದ್ದಾನೆ ಮತ್ತು ಆತನಿಂದ ತಿಂಗಳಿಗೆ 65,000 ರೂ ನೆರವು ಹಾಗೂ ಮಗನ ಜೊತೆಗಿರುವಂತೆ ಅರ್ಜಿ ಸಲ್ಲಿಸಿದ್ದು ಇದರ ಈ ಹಿನ್ನೆಲೆ 2017ರ ಜನವರಿ 12ರಂದು ಕೋರ್ಟ್ಗೆ ಹಾಜರಾಗುವಂತೆ ಅರ್ಜಿ ವಿಚಾರಣೆ ನಡೆಸಿದ ಮೇಲೂರು ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.
ನಟ ಧನುಷ್ ತಮ್ಮ ಹಿರಿಯ ಮಗನಾಗಿದ್ದು, ಆತನ ಹೆಸರು ‘ಕಲೈಚೆಲ್ವನ್’ ಎಂದು ತಿಳಿಸಿದ ಈ ದಂಪತಿಗಳು ನಟನಾಗಲು ಶಾಲೆ ಬಿಟ್ಟ ಧನುಷ್ ಕೆ.ರಾಜಾ ಎಂದು ಹೆಸರು ಬದಲಿಸಿಕೊಂಡು ಚೆನ್ನೈ ಸೇರಿದ್ದ, 11ನೇ ತರಗತಿವರೆಗೂ ಶಿವಗಂಗಾದಲ್ಲಿ ಶಿಕ್ಷಣ ಪಡೆದ ಧನುಷ್, ರಾಜಾಜಿ ಸರ್ಕಾರಿ ಆಸ್ಪತ್ರೆ ಮಧುರೈನಲ್ಲಿ ಜನಿಸಿದ್ದು ಮತ್ತು ನಂತರದ ದಿನಗಳಲ್ಲಿ ಧನುಷ್ ಚೆನ್ನೈಗೆ ಹೋದ ನಂತರ ದಂಪತಿಗಳು ಅವನ ಭೇಟಿಗೆ ಅನೇಕ ಪ್ರಯತ್ನ ಪಟ್ಟಿದ್ದು, ಫಲಕಾರಿಯಾಗಲಿಲ್ಲ, ನಟನಾದ ಮೇಲೆ ನಮ್ಮನ್ನು ಧನುಷ್ ಸಂಪರ್ಕಿಸಿಲ್ಲ ಎಂದು ಹೇಳಿದ್ದಾರೆ.