ಮೈಸೂರು: ಕೊರೋನದಿಂದ ಕಷ್ಟದ ಪರಿಸ್ಥಿತಿಯಲ್ಲಿದ್ದ ಚಲನಚಿತ್ರ ಪೋಷಕ ನಟರಿಗೆ ಜನಮನ ವೇದಿಕೆಯ ಅಧ್ಯಕ್ಷರಾದ ನಗರ ಪಾಲಿಕೆ ಸದಸ್ಯ ಮ.ವಿ.ರಾಮಪ್ರಸಾದ್ ಅವರು ಆರ್ಥಿಕ ಸಹಾಯ ನೀಡಿದರು.
ಈ ಸಂಬಂಧ ನಡೆದ ಕಾರ್ಯಕ್ರಮದಲ್ಲಿ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಕಲಾವಿದರಿಗೆ 75000 ಸಾವಿರ ರೂ.ಗಳನ್ನು ನೀಡಿದರು, ಸಹಕಾರಿ ದುರೀಣ ರಾಜೀವ್ ಅವರು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಸಂದೇಶ್ ನಾಗರಾಜ್ ಅವರು 75000 ರೂ.ಗಳನ್ನು, ಸಹಕಾರಿ ದುರೀಣ ರಾಜೀವ್ ಅವರು 25000, ಉದ್ಯಮಿ ಅಮರ್ ನಾಥ್ ರಾಜೇ ಅರಸ್ ಅವರು 25000 ರೂ.ಗಳನ್ನು ನೀಡಿದರು.
ಈ ಹಣದಲ್ಲಿ ತಲಾ 8 ಸಾವಿರ ರೂ.ಗಳಮತೆ 30 ಕಲಾವಿದರಿಗೆ ವಿತರಿಸಲಾಯಿತು. ಇದರ ಜೊತೆಗೆ ಹಣ್ಣು ಹಾಗೂ ಗಿಡಗಳನ್ನು ನೀಡಲಾಯಿತು, ಚಲನಚಿತ್ರ ಪೋಷಕರ ನಟರಾದ ಡಿಂಗ್ರಿ ನಾಗರಾಜ್, ರೇಖಾ ದಾಸ್, ವೈದ್ಯನಾಥ್ ಬಿರಾದಾರ್, ಶಂಕರ್ ಅಶ್ವಥ್, ಮೈಸೂರು ರಾಮಾನಂದ ಸೇರಿದಂತೆ ಹಲವರು ಇದ್ದರು.
ಈ ವೇಳೆ ಮಾತನಾಡಿದ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಕಲಾವಿದರು ಹೆದರುವ ಅಗತ್ಯವಿಲ್ಲ. ನಮ್ಮ ಸರ್ಕಾರ ನಿಮ್ಮೊಂದಿಗಿದೆ ಮುಂದಿನ ದಿನಗಳಲ್ಲಿ ಇನ್ನು ಹಲವಾರು ಯೋಜನೆಗಳನ್ನು ಸರ್ಕಾರ ನಿಮಗೋಸ್ಕರ ತರಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ನಗರ ಅಧ್ಯಕ್ಷರಾದ ಶ್ರೀವತ್ಸ, ನಗರ ಗ್ರಾಮಾಂತರ ಅಧ್ಯಕ್ಷರಾದ ಮಹೇಂದ್ರ, ಮೈ ಮುಲ್ ನಿರ್ದೇಶಕ ಅಶೋಕ್, ಮುಖಂಡರಾದ ಸಿ.ಸಂದೀಪ್, ಸೋಮೇಶ್, ಧರ್ಮೇಂದ್ರ, ಅದ್ವೈತ್, ಶಿವು, ರಾಮಚಂದ್ರ, ಪ್ರಭಾಕರ್ ಇದ್ದರು.