ನವದೆಹಲಿ: ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ(ಏಮ್ಸ್) ಬಾಲಿವುಡ್ ನಟ ಸುಶಾಂತ್ ಮರಣೋತ್ತರ ಪರೀಕ್ಷೆಯಲ್ಲಿ ಕೊಲೆಯ ಸಾಧ್ಯತೆಗಳನ್ನು ತಳ್ಳಿಹಾಕಿದ್ದು, ಸಿಬಿಐ ಈಗ ಆತ್ಮಹತ್ಯೆಗೆ ಕಾರಣಗಳನ್ನು ಹುಡುಕುತ್ತಿದೆ.
ಸಿಬಿಐಗೆ ನೆರವಾಗಲು ಏಮ್ಸ್ ನ ಫಾರೆನ್ಸಿಕ್ ತಂಡವನ್ನು ರಚಿಸಲಾಗಿತ್ತು. ಈ ತಂಡವು ನಟ ಸಾವು ಕೊಲೆಯಲ್ಲ ಎಂದು ಹೇಳಿದ್ದು, ಇದರಿಂದ ಸಿಬಿಐ ಈಗ ಆತ್ಮಹತ್ಯೆಗೆ ಪ್ರಚೋದನೆ ಏನು ಎಂದು ಹುಡುಕುತ್ತಲಿದೆ.
ಸುಶಾಂತ್ ಕುಟುಂಬಸ್ಥರು ಹೇಳಿರುವಂತೆ ನಟನಿಗೆ ವಿಷವುಣಿಸಿ ಅಥವಾ ನೇಣು ಹಾಕಿಸಿ ಕೊಲೆ ಮಾಡಿರುವಂತಹ ಸಾಧ್ಯತೆಯನ್ನು ಐದು ಸದಸ್ಯರ ತಂಡವು ತಿರಸ್ಕರಿಸಿದೆ.