News Karnataka Kannada
Saturday, April 27 2024
ಕ್ಯಾಂಪಸ್

“ಮನುಷ್ಯನ ಪ್ರಜ್ಞಾಜಾಗೃತಿಗೆ ಸಾಹಿತ್ಯಲೋಕ ಸಹಕಾರಿ”: ವಿಕ್ರಂ ನಾಯಕ್

"The world of literature contributes to the conscious awakening of man"
Photo Credit : News Kannada

ಉಜಿರೆ: “ಇತ್ತೀಚಿನ ದಿನಮಾನಗಳಲ್ಲಿ ಮಾನವ ಸಂಘರ್ಷಕ್ಕೆ ಸಾಹಿತ್ಯ ಅಧ್ಯಯನವು ಮದ್ದಾಗಿ ಕಾರ್ಯನಿರ್ವಹಿಸಬಲ್ಲದು” ಎಂದು ಮೂಡುಬಿದಿರೆಯ ಎಕ್ಸಲೆಂಟ್ ಪಿ.ಯು. ಕಾಲೇಜಿನ ಭಾಷಾ ವಿಭಾಗದ ಮುಖ್ಯಸ್ಥ ವಿಕ್ರಂ ನಾಯಕ್ ಅಭಿಪ್ರಾಯಪಟ್ಟರು.

ಉಜಿರೆಯ ಎಸ್.ಡಿ.ಎಂ. ಸ್ನಾತಕೋತ್ತರ ಕೇಂದ್ರದ ಇಂಗ್ಲಿಷ್ ವಿಭಾಗದ ವತಿಯಿಂದ ಆಯೋಜಿಸಲಾಗಿದ್ದ ಸಾಹಿತ್ಯ ಸಂಘಕ್ಕೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಸಾಹಿತ್ಯ ಕ್ಷೇತ್ರವು ಸದಾ ವೈವಿಧ್ಯತೆಯ ಆಗರವಾಗಿದ್ದು, ಓದುಗರಲ್ಲಿ ವಿಮರ್ಶಾ ಭಾವವನ್ನು ಜಾಗೃತಗೊಳಿಸುತ್ತದೆ. ಇಂಗ್ಲಿಷ್ ಸಾಹಿತ್ಯವಂತೂ ತನ್ನ ಒಡಲಲ್ಲಿ ಅಪಾರವಾದ ಜ್ಞಾನಭಂಡಾರವನ್ನು ಅಡಕವಾಗಿರಿಸಿಕೊಂಡಿದೆ. ಅದರ ಸದುಪಯೋಗವನ್ನು ಪ್ರತಿಯೋರ್ವ ನಾಗರಿಕನೂ ಪಡೆದುಕೊಳ್ಳಬೇಕು ಎಂದು ಹೇಳಿದರು.

ಶೇಕ್ಸ್ ಪಿಯರ್ ಒಬ್ಬ ಸಾರ್ವಕಾಲಿಕ ಶ್ರೇಷ್ಠ ಸಾಹಿತಿಯಾಗಿದ್ದರು. ಇಂದಿನ ಬಹುಪಾಲು ಯುವಪೀಳಿಗೆ ಶೇಕ್ಸ್ ಪಿಯರ್ ಕೃತಿಗಳನ್ನು ಓದುವಾಗ, ಇಂದಿನ ಕಾಲಮಾನಕ್ಕೆ ತಕ್ಕ ಪರಿದೃಷ್ಟಿಯಲ್ಲಿ ಅವರನ್ನು ಅಳೆಯುತ್ತಾರೆ. ಶೇಕ್ಸ್ ಪಿಯರ್ ಸಾಹಿತ್ಯದಲ್ಲಿ ಜನಾಂಗೀಯ ಭೇದವನ್ನು ಹುಟ್ಟುಹಾಕಿದರೆಂದು ಸಂಬೋಧಿಸುತ್ತಾರೆ. ದಿಟದಲ್ಲಿ, ಆಯಾ ಕಾಲಮಾನಕ್ಕೆ ತಕ್ಕುದಾದ ದೃಷ್ಟಿಯಲ್ಲಿ ಅವರ ಕೃತಿಗಳನ್ನು ವಿಮರ್ಶಿಸಬೇಕೇ ವಿನಃ ಇಂದಿನ ಸಾಮಾಜಿಕತೆಗೆ ಅನುಗುಣವಾಗಲ್ಲ ಎಂದರು.

ವ್ಯಕ್ತಿಯೊಬ್ಬ ಯಾವುದೇ ಪ್ರದೇಶಕ್ಕೆ ಭೇಟಿ ನೀಡಿದರೂ, ಅಲ್ಲಿನ ಸಾಂಸ್ಕೃತಿಕ ವೈವಿಧ್ಯತೆಯ ಜೊತೆಗೆ, ಆಹಾರ ವೈವಿಧ್ಯತೆಯನ್ನು ಗುರುತಿಸಿ ಅನುರಣಿಸುವ ವಿಶಾಲ ಮನಃಸ್ಥಿತಿ ಬೇಕಾಗುತ್ತದೆ. ತನ್ನ ಹವ್ಯಾಸಗಳಲ್ಲಿ ಅಳವಡಿಸಿಕೊಂಡ ವೈವಿಧ್ಯತೆಯೇ ಆತನ ಸಾಹಿತ್ಯಲೋಕ ಮತ್ತು ಅಭಿರುಚಿಗಳಲ್ಲಿ ಹೊರಹೊಮ್ಮುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಉದ್ಘಾಟನೆ ನೆರವೇರಿಸಿದ ಉಜಿರೆ ಎಸ್.ಡಿ.ಎಂ. ಪದವಿ ಕಾಲೇಜಿನ ಇಂಗ್ಲಿಷ್ ವಿಭಾಗ ಮುಖ್ಯಸ್ಥ ಪ್ರೊ. ಗಜಾನನ ಆರ್. ಭಟ್ ವಿಭಾಗದ ಭಿತ್ತಿಪತ್ರಿಕೆ ಬಿಡುಗಡೆಗೊಳಿಸಿದರು.

ಪ್ರಥಮ ಮತ್ತು ದ್ವಿತೀಯ ವರ್ಷದ ವಿದ್ಯಾರ್ಥಿಗಳ ಸಮ್ಮಿಲನದಲ್ಲಿ ಜರಗಿದ ಕಾರ್ಯಕ್ರಮದಲ್ಲಿ, ಸಂಘದ ಕಾರ್ಯನೀತಿಗಳಿಗೆ ಬದ್ಧರಾಗಿರುತ್ತೇವೆಂದು ವಿದ್ಯಾರ್ಥಿಗಳು ಪ್ರಮಾಣಗೈದರು.

ಸ್ನಾತಕೋತ್ತರ ಕೇಂದ್ರದ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾದ ಡಾ. ಮಂಜುಶ್ರೀ ಆರ್. ಮತ್ತು ಸಹಾಯಕ ಪ್ರಾಧ್ಯಾಪಕ ಪ್ರೊ. ವಿಘ್ನೇಶ್ ಐತಾಳ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಅದಿರಾ ಅನಿಲ್ ಕಾರ್ಯಕ್ರಮ ನಿರೂಪಿಸಿದರು. ಸೆಸಿಲ್ ವಂದಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು