ಉಜಿರೆ: “ಭಾರತವು ಬಹುಭಾಷೀಯ ದೇಶ ವಿಶ್ವ ಹಿಂದಿ ದಿವಸದ ಉದ್ದೇಶ ಹಿಂದಿಯ ಜೊತೆ ಉಳಿದ ಭಾಷೆಗಳನ್ನು ಸೇರಿಸಿಕೊಂಡು ಅಖಂಡ ಭಾರತದ ನಿರ್ಮಾಣವಾಗಿದೆ” ಎಂದು ಉಜಿರೆ ಎಸ್ ಡಿ ಎಂ ರೆಸಿಡೆನ್ಸಿಯಲ್ ಕಾಲೇಜಿನ ಹಿಂದಿ ಉಪನ್ಯಾಸಕರಾದ ಸುನಿಲ್ ಪಂಡಿತ್ ನುಡಿದರು.
ಜನವರಿ ೧೦ ರಂದು ಎಸ್ ಡಿ ಎಂ ಕಾಲೇಜಿನ ಸಮ್ಯಗ್ದರ್ಶನ ಸಭಾಂಗಣದಲ್ಲಿ ಹಿಂದಿ ವಿಭಾಗ ಮತ್ತು ಬ್ಯಾಂಕ್ ಆಫ್ ಬರೋಡಾ ದ ಸಂಯುಕ್ತಾಶ್ರಯದಲ್ಲಿ ನಡೆದ ವಿಶ್ವ ಹಿಂದಿ ದಿವಸ್ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಭಾಗಿವಹಿಸಿದ ಅವರು ಹಿಂದಿ ಭಾಷೆಯ ಮಹತ್ವ ಮತ್ತು ವ್ಯಾಪಕತೆಯನ್ನು ತಿಳಿಸಿದರು.
ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಬ್ಯಾಂಕ್ ಆಫ್ ಬರೋಡಾ ಉಜಿರೆ ಶಾಖೆಯ ಶಾಖಾಪ್ರಭಂದಕರಾದ ಎನ್ ಪ್ರಸಾದ್ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಉಪಪ್ರಾಂಶುಪಾಲರಾದ ಶಾಂತಿಪ್ರಕಾಶ್ ವಹಿಸಿದ್ದರು.
ಸಮಾರಂಭದಲ್ಲಿ ಹಿಂದಿ ದಿವಸದ ಪ್ರಯುಕ್ತ ಆಯೋಜಿಸಲಾದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನವನ್ನು ನೀಡಲಾಯಿತು ಜೊತೆಗೆ ಹಿಂದಿ ಭಾಷೆಯ ಕುರಿತಾದ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು.
ಈ ಸಂದರ್ಭದಲ್ಲಿ ಹಿಂದಿ ವಿಭಾಗದ ಮುಖ್ಯಸ್ಥರಾದ ಡಾ. ಮಲ್ಲಿಕಾರ್ಜುನ, ಹಿಂದಿ ವಿಭಾಗದ ಉಪನ್ಯಾಸಕಿ ಶೃುತಿ ಮಣ್ಕೀಕರ್ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಉಪನ್ಯಾಸಕ ಡಾ. ಮಲ್ಲಿಕಾರ್ಜುನ ಸ್ವಾಗತಿಸಿದರು , ಉಪನ್ಯಾಸಕಿ ಶೃುತಿ ಮಣ್ಕೀಕರ್ ವಂದಿಸಿದರು, ಕಾರ್ಯಕ್ರಮವನ್ನು ಫರ್ಹಾನ ಮತ್ತು ಪುಣ್ಯ ನಿರೂಪಿಸಿದರು.