News Karnataka Kannada
Saturday, April 27 2024
ಮಂಗಳೂರು

ಮಂಗಳೂರು: ಅಲೋಶಿಯಸ್ ಸಂಸ್ಥೆಗಳ ಸಿಬ್ಬಂದಿಗೆ ಎಸ್ಎಸಿಎಎ ವತಿಯಿಂದ ಸನ್ಮಾನ

Mangaluru: SACAA felicitates staff of Aloysius Institutes
Photo Credit : News Kannada

ಮಂಗಳೂರು:  ಪ್ರತಿಷ್ಠಿತ ಸಂಸ್ಥೆಯ ವಿವಿಧ ಘಟಕಗಳಲ್ಲಿ ತಮ್ಮ 25 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ ಸಂತ ಅಲೋಶಿಯಸ್ ಸಂಸ್ಥೆಗಳ ಸಿಬ್ಬಂದಿಗೆ ಎಸ್ಎಸಿಎಎ ವತಿಯಿಂದ ಸನ್ಮಾನ ಏಪ್ರಿಲ್ ೨೬, ೨೦೨೩ ರಂದು ಎಲ್ ಎಫ್ ರಸ್ಕೀನ್ಹಾ ಸಭಾಂಗಣದಲ್ಲಿ ನಡೆಯಿತು.

ಗಣ್ಯರಾದ ಫಾ.ಮೆಲ್ವಿನ್ ಪಿಂಟೊ ಎಸ್‌ಜೆ (ರೆಕ್ಟರ್ ಮತ್ತು ಎಸ್‌ಎಸಿಎಎ ಪೋಷಕ), ರೆ.ಡಾ. ಪ್ರವೀಣ್ ಮಾರ್ಟಿಸ್ ಎಸ್‌ಜೆ (ಪ್ರಾಂಶುಪಾಲರು ಮತ್ತು ಎಸ್‌ಎಸಿಎಎ ನಿರ್ದೇಶಕ), ಸುನೀಲ್ ಕುಂದರ್ ಕೆ (ಎಸ್‌ಎಸಿಎಎ ಅಧ್ಯಕ್ಷ),  ಅನಿಲ್ ಕುಮಾರ್ ಜೆ (ಎಸ್‌ಎಸಿಎಎ ), ಡಾ ರಿಚರ್ಡ್ ಗೊನ್ಸಾಲ್ವೆಸ್( ಸಂಚಾಲಕರು, ಫಾದರ್ ಕ್ಲಿಫರ್ಡ್ ಸಿಕ್ವೇರಾ ಎಸ್‌ಜೆ (ಪಿಯು ಕಾಲೇಜಿನ ಪ್ರಾಂಶುಪಾಲರು) ಮತ್ತು ಫಾದರ್ ಜಾನ್ ಡಿಸೋಜ ಎಸ್‌ಜೆ (ಐಟಿಐ ಪ್ರಾಂಶುಪಾಲರು) ಉಪಸ್ಥಿತರಿದ್ದರು.

ಡಾ. ಪ್ರವೀಣ್ ಮಾರ್ಟಿಸ್ ಎಸ್.ಜೆ  ಅಭಿನಂದನಾ ಭಾಷಣದಲ್ಲಿ, “ಸಂಸ್ಥೆಯನ್ನು ನಿರ್ಮಿಸುವುದು ಕಟ್ಟಡವಲ್ಲ, ಅದರಲ್ಲಿರುವ ಜನರು. ನೀವು ನಿಜವಾದ ರಾಯಭಾರಿಗಳು ಮತ್ತು ಈ ಸಂಸ್ಥೆಯನ್ನು ಬಲಪಡಿಸುವವರು ನೀವೇ” ಎಂದರು.

ಕಾರ್ಯಕ್ರಮದಲ್ಲಿ ಸುಮಾರು ೪೬ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ಪ್ರಮಾಣಪತ್ರಗಳು, ಶಾಲು, ಸ್ಮರಣಿಕೆಗಳು ಮತ್ತು ಉಡುಗೊರೆ ನೀಡಿ ಸನ್ಮಾನಿಸಲಾಯಿತು. ಸಂತ ಅಲೋಶಿಯಸ್ (ಸ್ವಾಯತ್ತ) ಕಾಲೇಜಿನ ರಿಜಿಸ್ಟ್ರಾರ್, ಡಾ. ಆಲ್ವಿನ್ ಡೇಸಾ, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ  ಜೋಸಿಟ್ಟಾ ಐವೀರಾ ನೊರೊನ್ಹಾ ಹಾಗೂ ಪದವಿ ಪೂರ್ವ ಕಾಲೇಜಿನ   ಚಾರ್ಲ್ಸ್  ಪಿಂಟೋ ಮಾತನಾಡಿ ಸಂಸ್ಥೆಯು ಅವರಿಗೆ ನೀಡಿದ ಅದ್ಭುತ ಅವಕಾಶಕ್ಕಾಗಿ ಎಲ್ಲಾ ಗೌರವಾನ್ವಿತರ ಪರವಾಗಿ ಎಸ್ಎಸಿಎಎ ಮತ್ತು ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದರು.

ಫಾ.ಮೆಲ್ವಿನ್ ಜೋಸೆಫ್ ಪಿಂಟೋ ಎಸ್.ಜೆ. ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದವರಿಗೆ ಧನ್ಯವಾದ ಸಲ್ಲಿಸಿದರು.

ರಾಷ್ಟ್ರಗೀತೆ ಹಾಡುವ ಮೂಲಕ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು. ಸಂಚಾಲಕ ಡಾ.ರಿಚರ್ಡ್ ಗೊನ್ಸಾಲ್ವಿಸ್ ವಂದಿಸಿದರು. ಅಭಿಷೇಕ್ ಮತ್ತು ಡಾ ಆರತಿ ಶಾನಭಾಗ್ ಕಾರ್ಯ ಕ್ರಮ ನಿರೂಪಿಸಿದರು.ಎಸ್ಎಸಿಎಎ ಅಧ್ಯಕ್ಷರಾದ  ಸುನೀಲ್ ಕುಂದರ್ ಕೆ ಸ್ವಾಗತಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು