ಮಂಗಳೂರು: ಸಂತ ಅಲೋಶಿಯಸ್ ಕಾಲೇಜು ಹಿ. ಪ್ರಾ. ಶಾಲೆ ಕೊಡಿಯಾಲ್ ಬೈಲ್ ಇಲ್ಲಿ ದಿನಾಂಕ 14-11-2022 ರಂದು ಮಕ್ಕಳ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಬಣ್ಣ ಬಣ್ಣ ಉಡುಗೆಗಳನ್ನು ತೊಟ್ಟ ವಿದ್ಯಾರ್ಥಿಗಳು ಸುಂದರ ಉದ್ಯಾನ ವನದಲ್ಲಿ ಅರಳಿದ ಹೂಗಳಂತೆ ಕಂಗೊಳಿಸುತ್ತಿದ್ದರು. ಬೆಳಿಗ್ಗೆ 10 ಗಂಟೆಗೆ ಸಂಭ್ರಮದ ಮಕ್ಕಳ ದಿನಾಚರಣೆಯ ಕಾರ್ಯಕ್ರಮ ಶಾಲಾ ಭವನದಲ್ಲಿ ನಡೆಯಿತು. ಕಾರ್ಯಕ್ರಮದ ಮುಖ್ಯ ಅಥಿತಿಗಳಗಿ ಶಾಲಾ ನಾಯಕ ಅಭೀಶ್ ಬಂಗೇರ ಹಾಗೂ ಉಪನಾಯಕ ಲಗನ್ ಜೆ. ಎಸ್. ಎಲ್ಲರ ಗಮನ ಸೆಳೆದರು. ಮುಖ್ಯ ಅಥಿತಿ ಸ್ಥಾನದಿಂದ ಮಾತಾಡಿದ ಅವರು ವಿದ್ಯಾರ್ಥಿಗಳು ಶಿಸ್ತಿನಿಂದ ಹಾಗೂ ಶೃದ್ಧೆಯಿಂದ ವಿದ್ಯೆ ಕಲಿತು ನೆಹರುರವರಂತೆ ಶ್ರೇಷ್ಠ ವ್ಯಕ್ತಿಗಳಾಗ ಬೇಕೆಂದು ಕರೆ ನೀಡಿದರು.
ನಂತರ ಒಂದನೇ ತರಗತಿಯ ಮಕ್ಕಳಿಂದ ಮನಮೋಹಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಮುಖ್ಯ ಅಥಿತಿಗಳು ಛದ್ಮ ವೇಷ ಸ್ಪರ್ದೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.
ನಂತರ ಶಿಕ್ಷಕ ವೃಂದದಿಂದ ವರ್ಣರಂಜಿತ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ನೃತ್ಯ ಹಾಸ್ಯಗಳಿಂದ ಶಿಕ್ಷಕರು ವಿದ್ಯಾರ್ಥಿಗಳನ್ನು ರಂಜಿಸಿದರು. ಅನಿಟ್ ಬಿಂದು ರವರು ಎಲ್ಲರಿಗೂ ಧನ್ಯವಾದ ಅರ್ಪಿಸಿದರು. ಇಡೀ ಕಾರ್ಯಕ್ರಮವನ್ನು ಒಂದನೇ ತರಗತಿಯ ವಿದ್ಯಾರ್ಥಿಗಳು ನಡೆಸಿಕೊಟ್ಟರು, ಶಾಲಾ ಗೀತೆಯೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು. ಈ ಕಾರ್ಯಕ್ರಮದಲ್ಲಿ ಮುಖ್ಯೋಪಾಧಾಯಿನಿ ಜೊಸ್ವಿಟಾ ನೊರೊನ್ನಾ , ಉಪಮುಖ್ಯೋಪಾಧ್ಯಾಯರಾದ ಲೀಯಾ ಡಿಸೋಜ ಹಾಗೂ ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷರಾದ ಮಂಗಳಾ ರೈ ಯವರು ಉಪಸ್ಥಿತರಿದ್ದರು.
ಶಿಕ್ಷಕ ರಕ್ಷಕ ಸಂಘದಿಂದ ವಿದ್ಯಾರ್ಥಿಗಳಿಗೆ ಪಾನೀಯವನ್ನು ವಿತರಿಸಲಾಯಿತು. ರುಚಿಯಾದ ಭೋಜನದ ನಂತರ ವಿದ್ಯಾರ್ಥಿ ಗಳಿಗೂ ಶಿಕ್ಷಕರಿಗೂ ಕ್ರಿಕೆಟ್ ಪಂದ್ಯಾಟ ನಡೆಯಿತು. ಈ ಪಂದ್ಯದಲ್ಲಿ ವಿದ್ಯಾರ್ಥಿಗಳ ತಂದ ಜಯಗಳಿಸಿತು.