ಮಂಗಳೂರು, ಆ.11: ಶಕ್ತಿನಗರದ ಶಕ್ತಿ ರೆಸಿಡೆನ್ಶಿಯಲ್ ಶಾಲೆ ಮತ್ತು ಶಕ್ತಿ ಪಪೂ ಕಾಲೇಜುವತಿಯಿಂದ ಇಂದು ರಕ್ಷಾಬಂಧನ ಕಾರ್ಯಕ್ರಮವನ್ನುಆಯೋಜಿಸಲಾಗಿತ್ತು.
ವಿದ್ಯಾರ್ಥಿನಿಯರು ಪ್ರತಿಯೊಬ್ಬ ವಿದ್ಯಾರ್ಥಿಗೂ ದೀಪದ ಆರತಿಯನ್ನು ಬೆಳಗಿ ತಿಲಕವನ್ನಿಟ್ಟು ಶುಭ ಹಾರೈಸಿದರು. ನಂತರ ಶಕ್ತಿ ಶಿಕ್ಷಣ ಸಂಸ್ಥೆಯ ಪ್ರಧಾನ ಸಲೆಹಗಾರರಮೇಶ ಕೆ. ಮಾತನಾಡಿ ರಕ್ಷೆಯು ಸೋದರ – ಸೋದರಿಯರ ಹಬ್ಬ. ಇಂದು ನಾವು ಬೇರೆ ಬೇರೆ ಮನೆಯಿಂದ, ಜಿಲ್ಲೆಯಿಂದ ಬಂದು ಇಲ್ಲಿ ಶಿಕ್ಷಣವನ್ನು ಪಡೆಯುತ್ತಿದ್ದೇವೆ. ನಾವು ಜಾತಿ ಬೇಧ ಭಾವ ಮತದಿಂದದೂರ ಉಳಿದು ನಾವೆಲ್ಲರೂ ಒಂದು ಎಂಬ ಭಾವನೆಯಲ್ಲಿಒಂದುಗೂಡಿಇರಬೇಕು.
ನಮ್ಮರಾಷ್ಟ್ರದ ಪರಿಕಲ್ಪನೆಯನ್ನು ಮುಂದಿಟ್ಟು ಮುಂದಿನ ದಿನಗಳಲ್ಲಿ ರಾಷ್ಟ್ರದ ಪ್ರಗತಿಗೆಕಾರ್ಯಪ್ರವೃತ್ತರಾಗಬೇಕು. ಈ ಮೂಲಕ ಅನಾದಿ ಕಾಲದಿಂದ ಬಂದ ಸಂಸ್ಕೃತಿಯನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೋಗೋಣಎಂದುಕರೆ ನೀಡಿದರು.
ಈ ಸಂದರ್ಭದಲ್ಲಿಕನ್ನಡಅಧ್ಯಾಪಕರಾದ ಶರಣಪ್ಪಇವರು ಪುರಾಣದ ಹಿನ್ನಲೆಯನ್ನು ತಿಳಿಸಿದರು. ಸಂಸ್ಕೃತಉಪನ್ಯಾಸಕರಾದ ಶ್ರೀಯುತ ರವಿಶಂಕರ್ ಹೆಗ್ಡೆ ಇವರು ಪರಸ್ಪರರಕ್ಷೆಕಟ್ಟುವಾಗ ಶ್ಲೋಕದ ಮೂಲಕ ವಿವರಣೆ ನೀಡಿದರು. ಸಂಸ್ಥೆಯ ಶಿಕ್ಷಕ ಶಿಕ್ಷಕೇತರ ಸಿಬ್ಬಂದಿಗಳು ರಕ್ಷೆಕಟ್ಟುವುದರ ಮೂಲಕ ರಕ್ಷಾಬಂಧನ ಆಚರಿಸಿದರು. ಶಕ್ತಿ ವಿದ್ಯಾ ಸಂಸ್ಥೆಯಅಭಿವೃದ್ಧಿಅಧಿಕಾರಿ ಪ್ರಖ್ಯಾತ್ ರೈ, ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ಪ್ರಾಂಶುಪಾಲೆ ವಿದ್ಯಾಕಾಮತ್ ಜಿ ಉಪಸ್ಥಿತರಿದ್ದರು.