ಮಂಗಳೂರು: ಮಂಗಳೂರು ಬಾರ್ ಅಸೋಸಿಯೇಶನ್ ಮತ್ತು ಎಡನೀರು ಮಠ ಕೇಶವಾನಂದ ಭಾರತಿ ಜಡ್ಜ್ಮೆಂಟ್ ಗೋಲ್ಡನ್ ಜುಬಲಿ ಸೆಲಬ್ರೇಶನ್ ಸಮಿತಿ ಸಹಯೋಗದಲ್ಲಿ ಮಂಗಳೂರು ಎಸ್ಡಿಎಂ ಲಾ ಕಾಲೇಜು ಸಹಯೋಗದಲ್ಲಿ ಕೇಶವಾನಂದ ಭಾರತಿ ಪ್ರಕರಣ ತೀರ್ಪು ಮತ್ತು ಭಾರತೀಯ ನ್ಯಾಯ ಶಾಸ್ತ್ರದ ಬೆಳವಣಿಗೆ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ.
ಎಸ್ಡಿಎಂ ಲಾ ಕಾಲೇಜಿನಲ್ಲಿ ಡಿ. 9ರಂದು ಬೆಳಗ್ಗೆ 9.30ಕ್ಕೆ ಕಾರ್ಯಕ್ರಮ ಆರಂಭವಾಗಲಿದೆ. ಗೋವಾ ರಾಜ್ಯಪಾಲ ಪಿ.ಎಸ್. ಶ್ರೀಧರನ್ ಪಿಲೈ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು, ಉಪನ್ಯಾಸ ನೀಡಲಿದ್ದಾರೆ. ಎಡನೀರು ಮಠದ ಸಚ್ಚದಾನಂದ ಭಾರತಿ ಸ್ವಾಮೀಜಿ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ನಿಟ್ಟಿ ವಿವಿ ಚಾನ್ಸಲರ್ ಎನ್. ವಿನಯ್ ಹೆಗ್ಡೆ, ಎಸ್ ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಸತಿಶ್ಚಂದ್ರ ಪಾಲ್ಗೊಳ್ಳುವರು. ಮಂಗಳೂರು ಬಾರ್ ಆಸೋಸಿಯೇಶನ್ ಅಧ್ಯಕ್ಷ ಪ್ರಥ್ವಿರಾಜ್ ರೈ ಅಧ್ಯಕ್ಷತೆ ವಹಿಸುವರು.