News Karnataka Kannada
Monday, May 13 2024
ಕ್ಯಾಂಪಸ್

ಡಿ.9ರಂದು ಮಂಗಳೂರು ಎಸ್‌ ಡಿಎಂ ಕಾಲೇಜಿನಲ್ಲಿ ಉಪನ್ಯಾಸ

ಮಂಗಳೂರು ಬಾರ್‌ ಅಸೋಸಿಯೇಶನ್‌ ಮತ್ತು ಎಡನೀರು ಮಠ ಕೇಶವಾನಂದ ಭಾರತಿ ಜಡ್ಜ್‌ಮೆಂಟ್‌ ಗೋಲ್ಡನ್‌ ಜುಬಲಿ ಸೆಲಬ್ರೇಶನ್‌ ಸಮಿತಿ ಸಹಯೋಗದಲ್ಲಿ ಮಂಗಳೂರು ಎಸ್‌ಡಿಎಂ ಲಾ ಕಾಲೇಜು ಸಹಯೋಗದಲ್ಲಿ ಕೇಶವಾನಂದ ಭಾರತಿ ಪ್ರಕರಣ ತೀರ್ಪು ಮತ್ತು ಭಾರತೀಯ ನ್ಯಾಯ ಶಾಸ್ತ್ರದ ಬೆಳವಣಿಗೆ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ.
Photo Credit : News Kannada

ಮಂಗಳೂರು: ಮಂಗಳೂರು ಬಾರ್‌ ಅಸೋಸಿಯೇಶನ್‌ ಮತ್ತು ಎಡನೀರು ಮಠ ಕೇಶವಾನಂದ ಭಾರತಿ ಜಡ್ಜ್‌ಮೆಂಟ್‌ ಗೋಲ್ಡನ್‌ ಜುಬಲಿ ಸೆಲಬ್ರೇಶನ್‌ ಸಮಿತಿ ಸಹಯೋಗದಲ್ಲಿ ಮಂಗಳೂರು ಎಸ್‌ಡಿಎಂ ಲಾ ಕಾಲೇಜು ಸಹಯೋಗದಲ್ಲಿ ಕೇಶವಾನಂದ ಭಾರತಿ ಪ್ರಕರಣ ತೀರ್ಪು ಮತ್ತು ಭಾರತೀಯ ನ್ಯಾಯ ಶಾಸ್ತ್ರದ ಬೆಳವಣಿಗೆ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ.

ಎಸ್‌ಡಿಎಂ ಲಾ ಕಾಲೇಜಿನಲ್ಲಿ ಡಿ. 9ರಂದು ಬೆಳಗ್ಗೆ 9.30ಕ್ಕೆ ಕಾರ್ಯಕ್ರಮ ಆರಂಭವಾಗಲಿದೆ. ಗೋವಾ ರಾಜ್ಯಪಾಲ ಪಿ.ಎಸ್‌. ಶ್ರೀಧರನ್‌ ಪಿಲೈ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು, ಉಪನ್ಯಾಸ ನೀಡಲಿದ್ದಾರೆ. ಎಡನೀರು ಮಠದ ಸಚ್ಚದಾನಂದ ಭಾರತಿ ಸ್ವಾಮೀಜಿ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ನಿಟ್ಟಿ ವಿವಿ ಚಾನ್ಸಲರ್‌ ಎನ್‌. ವಿನಯ್‌ ಹೆಗ್ಡೆ, ಎಸ್‌ ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಸತಿಶ್ಚಂದ್ರ ಪಾಲ್ಗೊಳ್ಳುವರು. ಮಂಗಳೂರು ಬಾರ್‌ ಆಸೋಸಿಯೇಶನ್‌ ಅಧ್ಯಕ್ಷ ಪ್ರಥ್ವಿರಾಜ್‌ ರೈ ಅಧ್ಯಕ್ಷತೆ ವಹಿಸುವರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು