ಮಂಗಳೂರು: ಸಂತ ಅಲೋಶಿಯಸ್ ಕಾಲೇಜು ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ರಕ್ಷಕ ಸಂಘದ ಮಹಾಸಭೆ 1.30ಕ್ಕೆ ಸರಿಯಾಗಿ ಶಾಲಾ ಸಭಾಭವನದಲ್ಲಿ ನಡೆಯಿತು. ಈ ಸುಂದರ ಸಮಾರಂಭದ ಅಧ್ಯಕ್ಷರಾದ ಸಂತ ಅಲೋಶಿಯಸ್ ಸಮೂಹ ಸಂಸ್ಥೆಗಳ ರೆಕ್ಟರ್ ವಂ! ಫಾ! ಮೆಲ್ವಿನ್ ಪಿಂಟೊ ಸ್.ಜೆ ಹಾಗೂ ಹಿಂದಿನ ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷರಾದ ಅರವಿಂದ ಕೆಯವರ ಉಪಸ್ಥಿತರಿದ್ದರು.
ಮಧುರ ದೇವರ ಸ್ತುತಿಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ರೆಕ್ಟರ್ ವಂ! ಫಾ! ಮೆಲ್ವಿನ್ ಪಿಂಟೊರವರು ಪೋಷಕರು ಸಂತೋಷ ಭರಿತ ಮಗುವನ್ನು ಅಪೇಕಿಸಿ, ಮಕ್ಕಳ ಧನಾತ್ಮಕ ಸಂಗತಿಗೆ ಒತ್ತು ನೀಡಿರಿ. ಮಕ್ಕಳಲ್ಲಿ ಬಹುವಿಧದ ಬುದ್ಧಿವಂತಿಕೆ ಮಾತ್ರ ಪರೀಕ್ಷೀಸುತ್ತೇವೆ. ಮಗುವನ್ನು ಆಲಿಸಿ, ಮಗುವಿನೊಂದಿಗೆ ಸಂಭಾಷಿಸಿ, ಮಗುವನ್ನು ಪ್ರೀತಿಯಿಂದ ತಿದ್ದಿ ಪ್ರಾಮಾಣಿಕ ವ್ಯಕ್ತಿಯಾಗಿ ಬೆಳೆಯಲು ಉತ್ತೇಜಿಸಿ, ವಿದ್ಯಾರ್ಥಿಗಳಿಗೆ ವೇಳಾವಟ್ಟಿಯಂತೆ ಮನೆಯಲ್ಲಿ ಕಾರ್ಯ ನಿರ್ವಹಿಸಲು ಪ್ರೋತ್ಸಾಹಿಸಲು ಪೋಷಕರಿಗೆ ಕರೆನೀಡಿದರು. ಮಕ್ಕಳನ್ನು ಶಾಲೆಗೆ ಕಳುಹಿಸುವಾಗ ಎಚ್ಚರವಹಿಸಿ ಖಾಸಗಿ ವಾಹನಗಳಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸುವ ಪೋಷಕರು, ಚಾಲಕರ ವರ್ತನೆ, ನಡತೆಯ ಬಗ್ಗೆ ಗಮನವಿರಿಸಿ. ನಮ್ಮ ಶಾಲೆಯು ಮಗುವಿನ ಸರ್ವಾಂಗೀಣ ಅಭಿವ್ರದ್ದಿಗೆ ಮಹತ್ವ ನೀಡುತ್ತೇವೆ.
ನಂತರ ಪೋಷಕ ಪ್ರಶ್ನೆಗಳಿಗೆ, ಸಮಸ್ಯೆಗಳಿಗೆ ಉತ್ತರಿಸಿದರು. ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜೊಸ್ವೀಟಾ ನೊರೊನ್ಹಾರವರು. ಶಾಲಾ ನಿಯಮಗಳು ಹಾಗೂ ಮಹತ್ವದ ಮಾಹಿತಿಗಳ ಬಗ್ಗೆ ಪೋಷಕರಿಗೆ ತಿಳಿಸಿದರು. ಶಾಲಾ ಸಂಚಾಲಕರಾದ ವಂ! ಫಾ! ಜೆರಾಲ್ಡ್ ಪೂರ್ಟಾದೊ ಸ್ ಜೆರವರು ಎಲ್ಲರನ್ನು ಸ್ವಾಗತಿಸಿದರು ಇದೇ ಸಮಯದಲ್ಲಿ ನಿರ್ಗಮಿತ ಉಪಾಧ್ಯಕ್ಷರಿಗೆ ಹಾಗೂ ಸಂಘದ ಸದಸ್ಯರಿಗೆ ಹೂ ನೀಡಿ ಗೌರವಿಸಲಾಯಿತು. ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾದ ಮಂಗಳ ರೈ ಹಾಗೂ ಕಾರ್ಯದರ್ಶಿ ಆಯ್ಕೆಯಾದ ಶೋಭಾ ಪಿಂಟೊರವನ್ನು ಈ ಸಂಧರ್ಭದಲ್ಲಿ ಸ್ವಾಗತಿಲಾಯಿತು. ಹಿರಿಯ ಶಿಕ್ಷಕಿ ಸೆಲೆಸ್ತಿನ್ ವಾಸ್ರವರು ಮುಖ್ಯ ಅತಿಥಿಗಳನ್ನು ಸಭೆಗೆ ಪರಿಚಯಿಸಿದರು. ಮಂಗಳ ರೈಯವರು ಧನ್ಯವಾದ ಸರ್ಮಪಿಸಿದರು. ಶೋಭಾ ಪಿಂಟೊರವರು ಕಾರ್ಯಕ್ರಮವನ್ನು ನಿರ್ವಹಿಸಿದರು. ರಾಷ್ಟ್ರ ಗೀತೆಯೊಂದಿಗೆ ಕಾರ್ಯಕ್ರಮ ಪೂರ್ಣಗೊಂಡಿತು.