ಬಂಟ್ವಾಳ: ಎಸ್.ವಿ.ಎಸ್ ದೇವಳ ಆಂಗ್ಲಮಾಧ್ಯಮ ಶಾಲೆ, ಬಂಟ್ವಾಳ ಇಲ್ಲಿ ನ.3ರಂದು ನಡೆದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ, 3 ಪ್ರಥಮ ಸ್ಥಾನ, 2 ದ್ವಿತೀಯ ಸ್ಥಾನ ಹಾಗೂ 1 ತೃತೀಯ ಸ್ಥಾನ ಪಡೆದಿರುತ್ತಾರೆ.
ಆಶುಭಾಷಣ ಸ್ಪರ್ಧೆಯಲ್ಲಿ 7ನೇ ತರಗತಿಯ ಪವನ್ ನಾಯಕ್ ಪ್ರಥಮ ಸ್ಥಾನ, ಸಂಸ್ಕೃತ ಕಂಠಪಾಠದಲ್ಲಿ 7ನೇ ತರಗತಿಯ ರಮ್ಯಭಟ್ ಪ್ರಥಮ ಸ್ಥಾನ, ಭಕ್ತಿಗೀತೆ ಸ್ಫರ್ಧೆಯಲ್ಲಿ 4ನೇ ತರಗತಿಯ ಅಪ್ರಮೇಯ ಪ್ರಥಮ ಸ್ಥಾನ, ಚಿತ್ರಕಲೆ ಸ್ಪರ್ಧೆಯಲ್ಲಿ 5ನೇ ತರಗತಿಯ ನಿನಾದ್ ಕೈರಂಗಳ್ ದ್ವಿತೀಯ ಸ್ಥಾನ, ಧಾರ್ಮಿಕ ಪಠಣ ಸಂಸ್ಕೃತ ಸ್ಪರ್ಧೆಯಲ್ಲಿ 7ನೇ ತರಗತಿಯ ಶ್ರೀವತ್ಸ ದ್ವಿತೀಯ, 3ನೇ ತರಗತಿಯ ಶ್ರೀರಾಮ ತೃತೀಯ ಸ್ಥಾನ ಪಡೆದಿರುತ್ತಾರೆ.