ಶಿವಮೊಗ್ಗ: ಶರಾವತಿ ಸಂತ್ರಸ್ತರನ್ನ ಒಕ್ಕಲೆಬ್ಬಿಸಲು ಹೊರಟಿರುವ ಬಿಜೆಪಿ ಸರ್ಕಾರ 18 ಸಾವಿರ ಕುಟುಂಬಸ್ಥರನ್ನ ನಿರಾಶ್ರಿತರನ್ನಾಗಿ ಮಾಡುತ್ತಿದ್ದು ಇದರ ವಿರುದ್ಧ ಕಾಂಗ್ರೆಸ್ ಹೋರಾಡಲಿದೆ ಎಂದು ಕೆಪಿಸಿಸಿ ಹಿಂದುಳಿದ ವರ್ಗಗಳ ಅಧ್ಯಕ್ಷ ಮಧು ಬಂಗಾರಪ್ಪ ಎಚ್ಚರಿಸಿದ್ದಾರೆ.
ಅವರು ಶಿವಮೊಗ್ಗದ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಬಡವರಿಗೆ ಅನುಕೂಲವಾಗಲಿ ಎಂದು ಕಾಗೋಡು ತಿಮ್ಮಪ್ಪನವರು ಮದನ್ ಗೋಪಾಲ್ ಅಧಿಕಾರಿಯ ಮೂಲಕ 3000 ಜನರಿಗೆ ಹಕ್ಕು ಪತ್ರ ವಿತರಿಸಿದ್ದರು.
ಪರಿಸರವಾದಿಗಳ ಹೋರಾಟದಿಂದ ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಸೂಡೂರು ಪ್ರಕರಣದಲ್ಲಿ ಕೇಂದ್ರದ ಆದೇಶ ಪಡೆಯದೆ ಇರುವುದರಿಂದ ಡಿನೋಟಿಫಿಕೇಷನ್ ರದ್ದು ಮಾಡಿತ್ತು. ಆದರೆ ರಾಜ್ಯ ಸರ್ಕಾರ 56 ಜನರಿಗೆ ಒಕ್ಕಲೇಳುವಂತೆ ರಾಜ್ಯ ಸರ್ಕಾರ ನೋಟೀಸ್ ನೀಡಿರುವುದೇಕೆ ಎಂದು ಮಧು ಬಂಗಾರಪ್ಪ ಆಗ್ರಹಿಸಿದರು.
ಸೂಡೂರು ಪ್ರಕರಣದಲ್ಲಿ ಹಿನ್ನಡೆಯಾದರೆ ಸರ್ಕಾರ ಯಾಕೆ 56 ಜನರಿಗೆ ಒಕ್ಕಲೆಬ್ಬಿಸಬೇಕು. ಒಕ್ಕಲೆಬ್ಬಿಸಲು ಹೋದರೆ ಅವರಿಗೆ ನಾಲ್ಕು ಪಟ್ಟು ಪರಿಹಾರ ನೀಡಬೇಕು. ಅದೂ ನೀಡದೆ ರಾಜ್ಯ ಸರ್ಕಾರ ನಡುನೀರಿನಲ್ಲಿ ಕೈ ಬಿಟ್ಟಿದೆ. ಬಿಜೆಪಿಯ ಡಬ್ಬಲ್ ಇಂಜಿನ್ ಸರ್ಕಾರವಿದೆ. ಕೇಂದ್ರದ ಅನುಮತಿ ಪಡೆದು ಸರಿಪಡಿಸಲಿ ಇಲ್ಲವಾದಲ್ಲಿ ಉಗ್ರಹೋರಾಟ ನಡೆಸಲಾಗುವುದು ಮಧು ಎಚ್ಚರಿಸಿದರು.
ಶರಾವತಿ ಸಂತ್ರಸ್ತ, ಡಿಕೆಶಿ ಮಲೆನಾಡಿನ ಸಮಸ್ಯೆಗೆ ಖಾಯಂ ಪರಿಹಾರ ಕಂಡುಕೊಳ್ಳಲು ಶೀಘ್ರದಲ್ಲಿಯೇ ಸಮಿತಿ ರಚಿಸಲಿದ್ದೇವೆ. ಪಾಲಿಕೆ ಸದಸ್ಯ ರಮೇಶ್ ಹೆಗ್ಡೆ ನೇಥೃತ್ವದಲ್ಲಿ ಸಮಿತಿ ರಚನೆಗೊಳಿಸಿ ಮಲೆನಾಡಿನ ಮತ್ತು ಕರಾವಳಿ ಭಾಗದ ಸಮಸ್ಯೆಯನ್ನ ಬಗೆಹರಿಸಲಾಗುವುದು. ಇದರಲ್ಲಿ ಜಯಂತ್ ಮತ್ತು ತೀ.ನಾಶ್ರೀನಿವಾಸ್ ಸಹ ಇರುತ್ತಾರೆ ಎಂದರು.