ಮಂಗಳೂರು : ಸ್ವತಂತ್ರ ಭಾರತದ ಪ್ರಪ್ರಥಮ ಶಿಕ್ಷಣ ಸಚಿವ, ಭಾರತ ರತ್ನ ಡಾ.ಮೌಲಾನಾ ಅಬುಲ್ ಕಲಾಂ ಆಜಾದ್ ಅವರು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಅಮೋಘ ಕೊಡುಗೆಯನ್ನು ಪರಿಗಣಿಸಿ ೨೦೦೮ ರಂದು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಪ್ರತಿವರ್ಷ ಅವರ ಜನ್ಮ ದಿನವಾದ ನ.೧೧ರಂದು ರಾಷ್ಟ್ರೀಯ ಶಿಕ್ಷಣ ದಿನವನ್ನಾಗಿ ದೇಶಾದ್ಯಂತ ಆಚರಿಸುವ ಬಗ್ಗೆ ನಿರ್ಧರಿಸಿತ್ತು ಎಂದು ಅಲ್ಪಸಂಖ್ಯಾತ ಮೊರಾರ್ಜಿ ದೇಸಾಯಿ ವಸತಿ ಪಿ ಯು ಕಾಲೇಜು ಇನ್ ಚಾರ್ಜ್ ಪ್ರಾಂಶುಪಾಲರು ಶ್ರೀ. ನಾಗ ಪ್ರಸಾದ್ ರೆಡ್ಡಿ ಅವರು ರಾಷ್ಟ್ರೀಯ ಶಿಕ್ಷಣ ದಿನ ಕಾರ್ಯಕ್ರಮದ ಸ್ವಾಗತ ಭಾಷಣದಲ್ಲಿ ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರೊ. ಶ್ರೀಮತಿ ನಿಶ್ಮಿತಾ ಡಿಸೋಜಾರವರು ಮೌಲಾನಾ ಅಬುಲ್ ಕಲಾಂ ಆಜಾದರ ಜೀವನ, ವಿಚಾರಧಾರೆ ಮತ್ತು ಅವರು ನಡೆದು ಬಂದ ದಾರಿ ಬಗ್ಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗಿಯಾಗಿ ಮಾತನಾಡಿದ ಯೆನೆಪೋಯಾ ಫರ್ಮಸಿ ಕಾಲೇಜು ಮತ್ತು ಸಂಶೋಧನಾ ಕೇಂದ್ರದ ಪ್ರಾಂಶುಪಾಲರು, ಡಾ. ಮೊಹಮ್ಮದ್ ಗುಲ್ಜಾರ್ ಅಹ್ಮದ್, ಶಿಕ್ಷಣ ಕ್ಷೇತ್ರಕ್ಕೆ ಇವರು ಸಲ್ಲಿಸಿದ ಕೊಡುಗೆಯನ್ನು ಪರಿಗಣಿಸಿ ೧೯೨೨ರಲ್ಲಿ ಮೌಲಾನಾ ಆಜಾದ್ ಅವರಿಗೆ ದೇಶದ ಪ್ರತಿಷ್ಠಿತ ಭಾರತ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು. ಐಐಟಿ ಸ್ಥಾಪನೆಯಲ್ಲಿಯೂ ಆಜಾದ್ ಪ್ರಮುಖರಾಗಿದ್ದರು. ಯುಜಿಸಿ (ಯೂನರ್ವಸಿಟಿ ಗ್ರ್ಯಾಂಟ್ಸ್ ಕಮಿಷನ್) ಯನ್ನೂ ಕೂಡಾ ಸ್ಥಾಪಿಸಿದ್ದರು ಎಂದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಸಿಬ್ಬಂದಿವರ್ಗದವರಿಗೆ ಮತ್ತು ವಿದ್ಯಾರ್ಥಿಗಳಿಗೆ ಸ.ಪ್ರೊಫೆಸರ್ ಡಾ. ಸುಮಯ್ಯತ್ ಟಿ ರವರು ಆರೋಗ್ಯಕರ ಜೀವನ: ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಯೋಗಕ್ಷೇಮ ದೃಷ್ಟಿಕೋನಗಳು ಮತ್ತು ಸ.ಪ್ರೊಫೆಸರ್ ಶ್ರೀಮತಿ ತಹ್ರೀನ್ ತಾಜ್ ರವರು ಆಹಾರ ಮತ್ತು ಹದಿಹರೆಯದವರ ಮೇಲೆ ಅದರ ಪರಿಣಾಮ ಎಂಬ ವಿಷಯದ ಬಗ್ಗೆ ಮಾತನಾಡಿದರು. ವಿದ್ಯಾರ್ಥಿಗಳಿಗೆ ಮಾನಸಿಕ ಚಟುವಟಿಕೆಗಳನ್ನು ಡಾ. ದರ್ಶನ್ ಜೆ.ಸಿ ರವರು ನಡೆಸಿ, ಶ್ರೀಮತಿ ಪ್ರಜಿತ್ ಬಿಜು ಅಧ್ಯಕ್ಷೆ ವಿದ್ಯಾರ್ಥಿ ಮಂಡಳಿ, ವೈ ಪಿ ಸಿ ಆರ್ ಸಿ ರವರು ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು, ಕಾರ್ಯಕ್ರಮವನ್ನು ವಂದಿಸಿದರು.