ಬೆಂಗಳೂರು : ಬೆಂಗಳೂರಿನ ಲೊಯೋಲ ಪದವಿ ಕಾಲೇಜಿನಲ್ಲಿ ನ.೬ ರಂದು ಕನ್ನಡ ಸಂಘ ಹಾಗೂ ಪ್ರದರ್ಶನ ಕಲೆ ಮತ್ತು ಸಾಂಸ್ಕೃತಿಕ ಸಂಘ ಸಹಯೋಗದಲ್ಲಿ ೬೬ನೇ ಕನ್ನಡ ರಾಜ್ಯೋತ್ಸವ ಸಮಾರಂಭವು ನಡೆಯಿತು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಅಂತಾರಾಷ್ಟ್ರೀಯ ಜಂಬೆ ಕಲಾವಿದ ಹಾಗೂ ಸಾಮಾಜಿಕ ಕಾರ್ಯಕರ್ತರಾದ ಬಾಲು ಜಂಬೆ ಅವರು ನೆರವೇರಿಸಿದರು. ಹಾಗೂ ಬಾಲು ಜಂಬೆ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನಟ, ಕಲಾವಿದ ಹಾಗೂ ಸಾಮಾಜಿಕ ಕಾರ್ಯಕರ್ತರಾದ ಚೇತನ್ ಅಹಿಂಸಾ ಮತ್ತು ಖ್ಯಾತ ಗಾಯಕರಾದ ವೆ.ಚಿ. ಅರುಣ್ ಕುಮಾರ್ ಭಾಗವಹಿಸಿದ್ದರು.