ತುಮಕೂರು: ತುಮಕೂರು ವಿಶ್ವವಿದ್ಯಾನಿಲಯದ ಸಿರಾ ಸ್ನಾತಕೋತ್ತರ ಕೇಂದ್ರ ಶ್ರೇಷ್ಠತಾ ಕೇಂದ್ರವನ್ನು ನವೆಂಬರ್ 22ರ ಸೋಮವಾರ ಬೆಳಿಗ್ಗೆ 10.30ಕ್ಕೆ ಉದ್ಘಾಟನಾ ಸಮಾರಂಭವನ್ನು ಏರ್ಪಡಿಸಲಾಗಿದೆ. ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಚಿತ್ರದುರ್ಗದ ಶ್ರೀ ಶಿವಶರಣ ಮಾದಾರ ಗುರುಪೀಠದ ಸ್ವಾಮೀಜಿಗಳಾದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮಿಗಳು ಹಾಗೂ ಪಟ್ಟನಾಯಕನಹಳ್ಳಿಯ ಶ್ರೀ ಗುರುಗುಂಡ ಬ್ರಹ್ಮೇಶ್ವರ ಮಹಾಸಂಸ್ಥಾನ ಮಠದ ಸ್ವಾಮೀಜಿಗಳಾದ ಶ್ರೀ ನಂಜಾವಧೂತ ಸ್ವಾಮಿಗಳು ನೂತನ ಸ್ನಾತಕೋತ್ತರ ಕೇಂದ್ರವನ್ನು ಉಧ್ಘಾಟಿಸಲಿದ್ದಾರೆ.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಕರ್ನಲ್ (ಪ್ರೊ.) ವೈ.ಎಸ್. ಸಿದ್ದೇಗೌಡ ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ತುಮಕೂರು ಸಿಂಡಿಕೇಟ್ ಸದಸ್ಯರುಗಳಾದ ಶ್ರೀನಿವಾಸ್ ಆರ್. ಕೆ., ಸುನೀಲ್ ಪ್ರಸಾದ್ ಟಿ.ಎಸ್., ರಾಜು, ಟಿ.ಡಿ. ವಿನಯ್, ಶ್ರೀಮತಿ ಐಶ್ವರ್ಯ ಸುರೇಶ್, ಪ್ರಸನ್ನಕುಮಾರ್ ಎಚ್., ಡಾ. ಭಾಗ್ಯ ಲಕ್ಷ್ಮೀ ಹಿರೇಂದ್ರ ಷಾ, ಶ್ರೀಮತಿ ಎಂ.ಎಸ್. ಭವ್ಯ, ಪ್ರೊ. ಡಿ.ವಿ. ಪರಶಿವಮೂರ್ತಿ, ಪ್ರೊ. ಎಲ್.ಪಿ. ರಾಜು, ಪ್ರೊ. ಎಚ್.ಎಸ್. ಶಿವಯೋಗಿ, ಶ್ರೀಮತಿ ಲತಾ ಬಿ.ಎಸ್., ಡಾ. ಟಿ. ವೆಂಕಟಾಚಲಯ್ಯ, ಡಾ. ಕೆ.ಸಿ. ಜಯಸ್ವಾಮಿ, ಪರೀಕ್ಷಾಂಗ ಕುಲಸಚಿವರಾದ ಪ್ರೊ. ನಿರ್ಮಲ್ ರಾಜು, ಹಣಕಾಸು ಅಧಿಕಾರಿಗಳಾದ ನರಸಿಂಹಮೂರ್ತಿ, ಇಂಜಿನಿಯರ್ ಬಲರಾಮು ಹಾಗೂ ವಿದ್ಯಾವಿಷಯಕ ಪರಿಷತ್ ಸದಸ್ಯರು ಉಪಸ್ಥಿತರಿರಲಿದ್ದಾರೆ.
ನೂತನ ಕ್ಯಾಂಪಸ್ನಲ್ಲಿ ಗಣಿತಶಾಸ್ತ್ರ, ಶಿಕ್ಷಣ ಶಾಸ್ತ್ರ, ಅರ್ಥಶಾಸ್ತ್ರಗಳು ಆರಂಭವಾಗಲಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಕೋರ್ಸುಗಳು ತೆರೆಯುವ ಯೋಜನೆ ಇದೆ ಎಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಸಚಿವರಾದ ಪ್ರೊ. ಕೆ. ಶಿವಚಿತ್ತಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.