News Karnataka Kannada
Thursday, May 09 2024
ಕ್ಯಾಂಪಸ್

ಎಸ್ ಡಿ ಎಂ ಗೆ ಎನ್.ಎಸ್.ಎಸ್.ಪ್ರಶಸ್ತಿ

Nss Sdm
Photo Credit :

ಬೆಳ್ತಂಗಡಿ: ಕರ್ನಾಟಕ ರಾಜ್ಯ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇದರ ವ್ಯಾಪ್ತಿಯಲ್ಲಿ ಬರುವ ರಾಷ್ಟ್ರೀಯ ಸೇವಾ ಯೋಜನೆ 2017-18, 2018-19 ಹಾಗೂ 2019-20 ಈ ಸಾಲಿನ ರಾಜ್ಯ ಪ್ರಶಸ್ತಿಯನ್ನು
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಉಜಿರೆ ಇಲ್ಲಿಯ ರಾಷ್ಟ್ರೀಯ ಸೇವಾ ಯೋಜನೆಯ ಘಟಕಗಳು 2018-19 ಹಾಗೂ 2019-20 ಸಾಲಿನ ಅತ್ಯುತ್ತಮ ಘಟಕ ಪ್ರಶಸ್ತಿಗಳನ್ನು ಪಡೆದಿದೆ.
ಈ ಘಟಕಗಳ ಯೋಜನಾಧಿಕಾರಿ ಸಸ್ಯಶಾಸ್ತ್ರ ಪ್ರಾಧ್ಯಾಪಕ ಗಣೇಶ ಶೆಂಡ್ಯೆ ಹಾಗೂ ಕಂಪ್ಯೂಟರ್ ಸೈನ್ಸ್ ವಿಭಾಗದ ಆಶಾಕಿರಣ ಇವರಿಗೆ ಉತ್ತಮ ಯೋಜನಾಧಿಕಾರಿ ರಾಜ್ಯಪ್ರಶಸ್ತಿ ಪಡೆದಿದ್ದಾರೆ.
2017- 18 ಹಾಗೂ 2019- 20 ಸಾಲಿನಲ್ಲಿ ಸ್ವಯಂಸೇವಕರಾದ ಧನು ಕೆಪಿ ಹಾಗೂ ಸತ್ಯಪ್ರಸಾದ್ ಇವರಿಗೆ ಉತ್ತಮ ಸ್ವಯಂಸೇವಕ ರಾಜ್ಯಪ್ರಶಸ್ತಿ ಬಂದಿರುತ್ತದೆ.
ಕಳೆದ ನಾಲ್ಕು ವರ್ಷಗಳಲ್ಲಿ ಕಾಲೇಜಿನ ಎನ್.ಎಸ್.ಎಸ್. ತಂಡ ಎರಡು ಬಾರಿ ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪೆರೇಡ್ ನಲ್ಲಿ, ದೇಶದ ಬೇರೆ ಬೇರೆ ಭಾಗಗಳಲ್ಲಿ ನಡೆದ 12 ರಾಷ್ಟ್ರೀಯ ಭಾವೈಕ್ಯತಾ ಶಿಬಿರಗಳಲ್ಲಿ ಭಾಗವಹಿಸಿದುದಲ್ಲದೆ ರಕ್ತದಾನ, ಆರೋಗ್ಯ ತಪಾಸಣಾ ಶಿಬಿರ, ಸ್ವಚ್ಛತಾ ಕಾರ್ಯಕ್ರಮ, ವೃಕ್ಷಾರೋಪಣ ಅಭಿಯಾನ, ಅನೀಮಿಯಾ ಮುಕ್ತ ಅಭಿಯಾನ, ಜಲ ಸಂರಕ್ಷಣಾ ಅಭಿಯಾನ ಮುಂತಾದ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿವೆ. ಈ ಎಲ್ಲಾ ಸಾಧನೆಗಳನ್ನು ಮಾನದಂಡವಾಗಿಟ್ಟುಕೊಂಡು ಕಾಲೇಜಿಗೆ ಈ ಬಾರಿ ಒಟ್ಟು ಆರು ರಾಜ್ಯ ಪ್ರಶಸ್ತಿಗಳು ಲಭಿಸಿವೆ.
ಬೆಂಗಳೂರಿನ ಕ್ರೀಡಾ ಇಲಾಖೆಯ ಯವನಿಕ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯ ಡಾ. ಸತೀಶ್ಚಂದ್ರ ಎಸ್, ಯೋಜನಾಧಿಕಾರಿಗಳಾದ ಗಣೇಶ ಶೆಂಡ್ಯೆ ಹಾಗೂ ಆಶಾಕಿರಣ, ಸ್ವಯಂಸೇವಕರಾದ ಶ್ರೀ ಧನು ಕೆಪಿ ಹಾಗೂ ಶ್ರೀ ಸತ್ಯಪ್ರಸಾದ್ ಅವರು ಕ್ರೀಡಾ ಮಂತ್ರಿಗಳಾದ ಡಾ. ಕೆ.ಸಿ. ನಾರಾಯಣ ಗೌಡ ಇವರ ಅಧ್ಯಕ್ಷತೆಯಲ್ಲಿ ಇತರ ಗಣ್ಯರ ಸಮಕ್ಷಮದಲ್ಲಿ ಪ್ರಶಸ್ತಿ ಸ್ವೀಕರಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು