ಕಾಸರಗೋಡು: ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ರಸ್ತೆ ಕಾಣದೇ ಕಾರೊಂದು ಸೇತುವೆಯಿಂದ ಹೊಳೆಗೆ ಬಿದ್ದಿದೆ.
ಕಾಸರಗೋಡು ಜಿಲ್ಲೆಯ ಪಳ್ಳಂಜಿರ ಪಾಂಡಿ ರಸ್ತೆಯ ಮದ್ಯ ಸಂಪರ್ಕ ಕಲ್ಪಿಸುವ ಸೇತುವೆಯಲ್ಲಿ ತಡೆ ಬೇಲಿ ಇಲ್ಲದ ಕಾರಣ ಕಾರೊಂದು ನಿಯಂತ್ರಣ ತಪ್ಪಿ ಹೊಳೆಗೆ ಬಿದ್ದಿದೆ. ಕಾರಿನಲ್ಲಿ ರಾಶಿದ್ ಹಾಗೂ ತಷ್ರೀಫ್ ಎಂಬ ಇಬ್ಬರು ಯುವಕರು ಪ್ರಯಾಣಿಸುತ್ತಿದ್ದು, ಕಾರು ಹೊಳೆಗೆ ಬಿದ್ದ ಕೂಡಲೇ ಕಾರಿನಿಂದ ಹೊರ ಬಂದು ಮರದ ಗೆಲ್ಲು ಹಿಡಿದು ಆಶ್ರಯ ಪಡೆದಿದ್ದರು.
ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದು, ಸ್ಥಳೀಯರ ಸಹಾಯದಿಂದ ಯುವಕರನ್ನು ರಕ್ಷಿಸಿದ್ದಾರೆ.
Ad