Bengaluru 22°C
Ad

ಕೊಳ್ಳೇಗಾಲ ಯಡಕುರಿಯ ಕಾವೇರಿ‌ ನದಿಯಲ್ಲಿ ಬೃಹತ್‌ ಮೊಸಳೆ ಪ್ರತ್ಯಕ್ಷ

ಜಿಲ್ಲೆಯ ಕೊಳ್ಳೇಗಾಲದ ಯಡಕುರಿಯ ಕಾವೇರಿ‌ ನದಿಯಲ್ಲಿ ಬೃಹತ್‌ ಮೊಸಳೆ ಪ್ರತ್ಯಕ್ಷವಾಗಿ ಜನರ ಆತಂಕಕ್ಕೆ ಕಾರಣವಾಗಿದೆ, ಈ ನಿಟ್ಟಿನಲ್ಲಿ ಸತ್ತೇಗಾಲ ಗ್ರಾಪಂ ವತಿಯಿಂದ ನದಿಯ ಬಳಿ ತೆರಳದಂತೆ ಜನರಲ್ಲಿ ಭಾನುವಾರ ಮಧ್ಯಾಹ್ನ ಜಾಗೃತಿಯನ್ನು ಮೂಡಿಸಲಾಯಿತು.

ಚಾಮರಾಜನಗರ: ಜಿಲ್ಲೆಯ ಕೊಳ್ಳೇಗಾಲದ ಯಡಕುರಿಯ ಕಾವೇರಿ‌ ನದಿಯಲ್ಲಿ ಬೃಹತ್‌ ಮೊಸಳೆ ಪ್ರತ್ಯಕ್ಷವಾಗಿ ಜನರ ಆತಂಕಕ್ಕೆ ಕಾರಣವಾಗಿದೆ, ಈ ನಿಟ್ಟಿನಲ್ಲಿ ಸತ್ತೇಗಾಲ ಗ್ರಾಪಂ ವತಿಯಿಂದ ನದಿಯ ಬಳಿ ತೆರಳದಂತೆ ಜನರಲ್ಲಿ ಭಾನುವಾರ ಮಧ್ಯಾಹ್ನ ಜಾಗೃತಿಯನ್ನು ಮೂಡಿಸಲಾಯಿತು.

Ad
300x250 2

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಸತ್ತೇಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಡಕುರಿಯ ಕಾವೇರಿ ನದಿಯ ನೀರನ್ನು ದನಗಾಹಿ, ಕುರಿಗಾಹಿಗಳಿಗೂ ಬಳಕೆ ಮಾಡುತ್ತಾರೆ ಅಲ್ಲದೆ ಯುವಕರು, ಮಕ್ಕಳು ಕೆರೆಯಲ್ಲಿ ಈಜಾಡುತ್ತಾರೆ. ಆದರೆ, ದಿಢೀರನೆ ಮೊಸಳೆ ಕಾಣಿಸಿಕೊಂಡಿರುವುದು ಈ ಭಾಗದ‌ ಜನತೆಯಲ್ಲಿ ಆತಂಕ ಸೃಷ್ಠಿಸಿದೆ.

ಶನಿವಾರ ಮೊಸಳೆ ದಾಳಿಯಿಂದ ಓರ್ವ ಪಾರಾಗಿದ್ದು ಕೊಳ್ಳೇಗಾಲ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ, ಹೀಗಾಗಿ ಮೊಸಳೆಯಿರುವ ಕಾರಣ ನೀರಿಗೆ ಇಳಿಯದಂತೆ ಜಾಗೃತಿ ಮೂಡಿಸಲಾಗಿದೆ.

Ad
Ad
Nk Channel Final 21 09 2023
Ad