ತಿರುವನಂತಪುರ: ಮುಂಬರುವ ವಿಧಾನಸಭೆ ಚುನಾವಣೆಯಗಳನ್ನು ಗಮನದಲ್ಲಿರಿಸಿ ಕರ್ನಾಟಕ ಜೆಡಿಎಸ್ ಕರ್ನಾಟಕದಲ್ಲಿ ಜೆಡಿಎಸ್ ಪಕ್ಷ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿರುವುದಕ್ಕೆ ಕೇರಳ ಜೆಡಿಎಸ್ ಘಟಕ ತೀವ್ರ ವಿರೋಧ ವ್ಯಕ್ತಪಡಿಸಿದೆ. ಜೆಡಿಎಸ್ನ ರಾಜ್ಯ ಘಟಕವು ಸ್ವತಂತ್ರವಾಗಿ ಅಸ್ತಿತ್ವ ಉಳಿಸಿಕೊಳ್ಳಲಿದೆ ಎಂದು ರಾಜ್ಯದ ವಿದ್ಯುತ್ ಸಚಿವ ಕೆ.ಕೃಷ್ಣನ್ಕುಟ್ಟಿ ಅವರು ಹೇಳಿಕೆ ನೀಡಿದ್ದಾರೆ. `ಬಿಜೆಪಿ ಜೊತೆಗಿನ ಮೈತ್ರಿಯು ಸ್ವೀಕಾರಾರ್ಹವಲ್ಲ. ಇದು, ಸರಿಯಾದ ನಿರ್ಧಾರವಲ್ಲ’ ಎಂದು ಕರ್ನಾಟಕದಲ್ಲಿರುವ ಪಕ್ಷದ ನಾಯಕತ್ವಕ್ಕೂ ನಾನು ಮತ್ತು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಮ್ಯಾಥ್ ಅವರಿಗೆ ತಿಳಿಸಿದ್ದೇವೆ’ ಎಂದರು. “ನಾವು ಬಾಂಧವ್ಯ ಕಡಿದುಕೊಳ್ಳುತ್ತಿದ್ದು, ಸ್ವತಂತ್ರವಾಗಿ ಇರುತ್ತೇವೆ ಎಂದು ತಿಳಿಸಿದೆವು. ಪಕ್ಷದ ರಾಜ್ಯ ಸಮಿತಿ ಸಭೆ ನಿರ್ಧಾರವು ಇದೇ ಆಗಿದೆ’ ಎಂದು ತಿಳಿಸಿದರು. ಮೈತ್ರಿ ಹಿನ್ನೆಲೆಯಲ್ಲಿ, ಜೆಡಿಎಸ್ನಿಂದ ಮೈತ್ರಿ ಕಡಿದುಕೊಳ್ಳದಿರುವುದಕ್ಕೆ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟವು ಸಿಪಿಎಂ ವಿರುದ್ಧ ವಾಗ್ದಾಳಿ ನಡೆಸುತ್ತಿದೆ.
ನಮಗೂ ಅವರಿಗೂ ಸಂಬಂಧವಿಲ್ಲ: ಹೀಗಂತ ಜೆಡಿಎಸ್ ಗೆ ಖಡಕ್ ಆಗಿ ಹೇಳಿದ ಕೇರಳ ಮುಖಂಡ ಯಾರು ಗೊತ್ತಾ
Photo Credit :
News Kannada
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.