ಲಂಡನ್: ಯುಕೆಯಲ್ಲಿನ ಭಾರತೀಯರು ಮತ್ತು ಜನಾಂಗೀಯ ಅಲ್ಪಸಂಖ್ಯಾತರ ಹಕ್ಕು ರಕ್ಷಣೆಗಾಗಿ ಇರುವ ಸಂಘಟನೆ ರೀಚ್ ಯುಕೆ ಸಂಘಟನೆ ಹಂಚಿಕೊಂಡ ಸಾಮಾಜಿಕ ಜಾಲತಾಣ ಸಂದೇಶದಲ್ಲಿ ಪಂಜಾಬಿ ರೆಸ್ಟೋರೆಂಟ್ ಮೇಲಿನ ದಾಳಿಯ ಬಗ್ಗೆ ವಿವರಿಸಿದೆ. ಅಲ್ಲದೆ ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸರನ್ನು ಒತ್ತಾಯಿಸಿದೆ.
“ಹ್ಯಾಮರ್ಸ್ಮಿತ್ನಲ್ಲಿರುವ ಪಂಜಾಬಿ ರೆಸ್ಟೊರೆಂಟ್ ‘ರಂಗ್ರೆಜ್ ರೆಸ್ಟೊರೆಂಟ್’ ದಾಳಿ ನಡೆದಿದೆ. ಸಿಖ್ ಅನುಯಾಯಿಗಳು ಇಂತಹ ಕುಕೃತ್ಯ ನಡೆಸುವುದಿಲ್ಲ. ಖಲಿಸ್ತಾನಿ ಉಗ್ರರು ದಾಳಿ ಮಾಡಿರಬಹುದು ಎಂಬುದು ನಮ್ಮ ಭಾವನೆ. ಯುಕೆ ಅಲ್ಪಸಂಖ್ಯಾತರಿಗೆ ರಕ್ಷಣೆ ಒದಗಿಸಿ ಎಂದು ಟ್ವೀಟ್ ಮಾಡಿದೆ. ಸಂಘಟನೆ ಹಂಚಿಕೊಂಡ ವಿಡಿಯೋದಲ್ಲಿ ಮುಸುಕುಧಾರಿಗಳ ಗುಂಪು ರೆಸ್ಟೋರೆಂಟ್ನ ಕಿಟಕಿಗಳ ಮೇಲೆ ಬಡಿದು ಜನರನ್ನು ಹೊರಗೆ ಬರುವಂತೆ ಕಿರುಚುತ್ತಿರುವುದನ್ನು ಕಾಣಬಹುದು. ರೆಸ್ಟೊರೆಂಟ್ನ ಹೊರಗೆ ಮುಸುಕುಧಾರಿಯೊಬ್ಬ ವಿಡಿಯೋ ಮಾಡುತ್ತಿದ್ದು, ರೆಸ್ಟೊರೆಂಟ್ನಲ್ಲಿದ್ದವರಿಗೆ ಭಯವಾಗುತ್ತಿದೆಯೇ ಎಂದು ಬೆದರಿಕೆ ಹಾಕುತ್ತಿರುವುದನ್ನು ಕಾಣಬಹುದು.
ರೆಸ್ಟೋರೆಂಟ್ ಮಾಲೀಕ ಹರ್ಮನ್ ಸಿಂಗ್ ಕಪೂರ್ ಕೃತ್ಯದ ಕುರಿತು ಹೀಗೆ ಪ್ರತಿಕ್ರಿಯೆ ನೀಡಿದ್ದಾರೆ. ಇಂತಹ ಕೃತ್ಯ ನಡೆಸುವುದು ಹೇಡಿಗಳ ಲಕ್ಷಣ. ಉಪಹಾರ ಮಂದಿರದ ಮೇಲೆ ದಾಳಿ ಮಾಡಿದಲ್ಲಿ ನಾವು ಭಯಪಡುತ್ತೇವೆ ಎಂದು ಭಾವಿಸಿದ್ದಾರೆ. ಆದರೆ ಅದು ಸುಳ್ಳು ಎಂದು ಟ್ವೀಟ್ ಮಾಡಿದ್ದಾರೆ.
“ನಿಜವಾದ ಸಿಖ್ ಹಿಂಸಾಚಾರವನ್ನು ನಂಬುವುದಿಲ್ಲ ಇದು ಸಿಖ್ಖರ ಮಾರ್ಗವಲ್ಲ. ನಾವು ಕತ್ತಿಯನ್ನು ಅಗತ್ಯವಿದ್ದಾಗ ಮಾತ್ರ ಎತ್ತುತ್ತೇವೆ, ಬಯಸಿದಾಗ ಅಲ್ಲ! ಈ ಹಿಂಸಾಚಾರವನ್ನು ನಿಲ್ಲಿಸುವಂತೆ ನಾನು ನನ್ನ ಸಿಖ್ ಸಹೋದರರನ್ನು ಬೇಡಿಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.