News Karnataka Kannada
Sunday, May 12 2024
ವಿದೇಶ

ಕೆನಡಾ: ಕ್ಯಾಲ್ಗರಿದಲ್ಲಿ ನಡೆದ ದೋಣಿ ದುರಂತದಲ್ಲಿ ಕೇರಳದ ಯುವಕರಿಬ್ಬರು ಸಾವು

Nanjangud: Unable to bear the pain in her stomach, a girl committed suicide by falling into a lake in Nanjangud.
Photo Credit : Wikimedia

ಕೆನಡಾ: ಕೆನಡಾದ ಕ್ಯಾನ್ಮೋರ್, ಕ್ಯಾಲ್ಗರಿದಲ್ಲಿ ನಡೆದ ದೋಣಿ ದುರಂತದಲ್ಲಿ ಕೇರಳದ ಯುವಕರಿಬ್ಬರು ಸಾವನ್ನಪ್ಪಿದ್ದಾರೆ.
ಈ ಘಟನೆಯಲ್ಲಿ ಓರ್ವ ನಾಪತ್ತೆಯಾಗಿದ್ದು ಅವರಿಗಾಗಿ ಹುಡುಕಾಟ ಮುಂದುವರಿದಿದೆ.

ಕೇರಳದ ಎರ್ನಾಕುಲಂ ಜಿಲ್ಲೆಯ ಜಿಯೋ ಪೈಲಿ (33), ಕೆವಿನ್ ವರ್ಗೀಸ್ (21) ಮೃತಪಟ್ಟವರಾಗಿದ್ದರೆ, ಲಿಯೊ ಮ್ಯಾಥ್ಯೂ (41) ನಾಪತ್ತೆಯಾದವರು. ಇದೇ ಅವಘಡದಲ್ಲಿ ತ್ರಿಶೂರ್ ಮೂಲದ ಜೀಜೋ ಜೋಸೆಫ್ ಎಂಬವರನ್ನು ರಕ್ಷಿಸಲಾಗಿದೆ.

ಸ್ಪ್ರೇ ಲೇಕ್ ಜಲಾಶಯದಲ್ಲಿ ಜಿಯೋ ಅವರಿಗೆ ಸೇರಿದ ಬೋಟ್ ನಲ್ಲಿ ಎಲ್ಲಾ ನಾಲ್ಕೂ ಮಂದಿ ಮೀನು ಹಿಡಿಯುವುದಕ್ಕೆ ಹೋಗಿದ್ದರು. ಈ ವೇಳೆ ದೋಣಿ ಆಕಸ್ಮಿಕವಾಗಿ ತಲೆಕೆಳಗಾಗಿ ಜಲಾಶಯದ ಶೀತಲೀಕರಣಗೊಂಡಿದ್ದ ನೀರಿಗೆ ಬಿದ್ದಿದೆ ಎಂದು ವರದಿಗಳು ಹೇಳಿವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು