News Karnataka Kannada
Friday, May 03 2024
ವಿದೇಶ

ಪ್ರಧಾನಿಯಾಗಿದ್ದು ಆಲೂ,ಟೊಮಾಟೋದ ಬೆಲೆ ನಿಗದಿಪಡಿಸುವುದಕ್ಕಲ್ಲ: ಪ್ರಧಾನಿ ಇಮ್ರಾನ್ ಖಾನ್

Pakistan
Photo Credit :

ಪಾಕಿಸ್ತಾನದ ನ್ಯಾಷನಲ್ ಅಸೆಂಬ್ಲಿಯಲ್ಲೀಗ ಅಲ್ಲಿನ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಮಂಡನೆಯಾಗಲಿರುವ ಅವಿಶ್ವಾಸ ಗೊತ್ತುವಳಿಯದ್ದೇ ಚರ್ಚೆ.

ಆಡಳಿತಾರೂಢ ಪಕ್ಷದಲ್ಲೂ ಇಮ್ರಾನ್ ಖಾನ್ ವಿರುದ್ಧ ಅಸಮಾಧಾನಗಳಿರುವುದರಿಂದ ಈ ಅವಿಶ್ವಾಸ ಮತ ಯಶಸ್ವಿಯಾಗಬಹುದು ಎಂಬ ಭರವಸೆಯಲ್ಲಿದೆ ಅಲ್ಲಿನ ವಿರೋಧ ಪಕ್ಷಗಳ ಗುಂಪು.

ಈ ಸಂದರ್ಭದಲ್ಲಿ ಸಾರ್ವಜನಿಕವಾಗಿ ಮಾತನಾಡಿರುವ ಪ್ರಧಾನಿ ಇಮ್ರಾನ್ ಖಾನ್, “ನಾನು ರಾಜಕೀಯಕ್ಕೆ ಬಂದಿದ್ದು ಮತ್ತು ಪ್ರಧಾನಿಯಾಗಿದ್ದು ಆಲೂ ಮತ್ತು ಟೊಮಾಟೋದ ಬೆಲೆ ನಿಗದಿಪಡಿಸುವುದಕ್ಕಲ್ಲ. ಈ ದೇಶದ ಯುವಕರಿಗೆ ಮಾರ್ಗ ತೋರಿಸಬೇಕೆಂಬುದು ನನ್ನ ಗುರಿ. ನನ್ನನ್ನು ಇಳಿಸಲು ಹೊರಟವರು ತಮ್ಮದೇ ಸಂಚಿನ ಭಾರಕ್ಕೆ ಹೂತುಹೋಗುತ್ತಾರೆ. 2008-18ರ ನಡುವೆ ಪಾಕಿಸ್ತಾನದ ಮೇಲೆ ಅಮೆರಿಕದ ಡ್ರೋನ್ ದಾಳಿಗಳಾಗುತ್ತಿದ್ದಾಗ ವಿಪಕ್ಷದ ನೇತಾರರೆಲ್ಲ ಮೌನ ತಾಳಿದ್ದರು” ಎನ್ನುವ ಮೂಲಕ ತಮ್ಮ ಪರ ಭಾವನಾತ್ಮಕ ಬೆಂಬಲವೊಂದನ್ನು ರೂಪಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ ಇಮ್ರಾನ್ ಖಾನ್.

342ಸದಸ್ಯ ಬಲದ ಅಲ್ಲಿನ ಸಂಸತ್ತಿನಲ್ಲಿ ಇವರನ್ನು ಕೆಳಗಿಳಿಸುವುದಕ್ಕೆ 272ಮತಗಳು ಬೇಕು. 2018ರಲ್ಲಿ ಚುನಾಯಿತರಾಗಿದ್ದವರು ಇಮ್ರಾನ್ ಖಾನ್. ಪಾಕಿಸ್ತಾನದ ಮುಂದಿನ ಸಾರ್ವತ್ರಿಕ ಚುನಾವಣೆ ಇರೋದು 2023ರಲ್ಲಿ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು