ಇಸ್ಲಾಮಾಬಾದ್ : ಪಾಕಿಸ್ತಾನದ ಭಯೋತ್ಪಾದನಾ ವಿರೋಧಿ ನ್ಯಾಯಾಲಯವು ಹಿಂದೂ ದೇವಾಲಯವನ್ನು ಧ್ವಂಸ ಮಾಡಿದ್ದ 22 ಆರೋಪಿಗಳಿಗೆ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಮದ್ರಸಾದಲ್ಲಿ ಜುಲೈ 2021 ರಲ್ಲಿ 8 ವರ್ಷದ ಬಾಲಕ ಮೂತ್ರ ವಿಸರ್ಜನೆ ಮಾಡಿದ್ದಾನೆ.ಈ ಹಿನ್ನೆಲೆ ಮುಸ್ಲಿಮರು ನಮ್ಮ ದೇವರಿಗೆ ಈ ಬಾಲಕ ಅಪವಿತ್ರಗೊಳಿಸಿದ್ದಾನೆ ಎಂದು ಆಕ್ರೋಶ ಹೊರಹಾಕಿದ್ದು, ಆ ಪರಿಣಾಮ ಗಣೇಶ ಮಂದಿರದ ಮೇಲೆ ದಾಳಿ ನಡೆಸಲು ಮುಂದಾಗಿದ್ದು, ಮರಣಾಂತಿಕ ಆಯುಧಗಳನ್ನು ತೆಗೆದುಕೊಂಡು ಹೋಗಿದ್ದಾರೆ.
ಈ ವೇಳೆ ದೇವಾಲಯವನ್ನು ಧ್ವಂಸಗೊಳಿಸುವುದಲ್ಲದೇ, ಭದ್ರತೆಗಾಗಿ ನಿಯೋಜಿಸಿದ್ದ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದರು. 84 ಜನರನ್ನು ವಶಕ್ಕೆ ತೆಗೆದುಕೊಳ್ಳಲಾಗಿತ್ತು.ಈ ಹಿನ್ನೆಲೆ ಘಟನೆಗೆ ಸಂಬಂಧಿಸಿದಂತೆ 84 ಶಂಕಿತರನ್ನು ವಿಚಾರಣೆ ನಡೆಸಿದರು. 22 ಮಂದಿಗೆ ಶಿಕ್ಷೆಯನ್ನು ಕೊಡಲಾಗಿದೆ. ಎಟಿಸಿ ನ್ಯಾಯಾಧೀಶ ನಾಸಿರ್ ಹುಸೇನ್ ಅವರು ತೀರ್ಪನ್ನು ಪ್ರಕಟಿಸಿದರು. ನ್ಯಾಯಾಧೀಶರು 22 ಶಂಕಿತರಿಗೆ ಐದು ವರ್ಷಗಳ ಜೈಲು ಶಿಕ್ಷೆಯನ್ನು ನೀಡಿದರು. ಉಳಿದ 62 ಮಂದಿಯನ್ನು ಬಿಡುಗಡೆ ಮಾಡಿದ್ದಾರೆ.