ಹಿಂದು, ಸಿಖ್ ಸೇರಿದಂತೆ ಪಾಕಿಸ್ತಾನದಲ್ಲಿ ಇಸ್ಲಾಮೇತರರು ಬದುಕುವುದು ಕಷ್ಟವಾಗಿರುವುದು ಜಗಜ್ಜಾಹೀರು ಸಂಗತಿ. ಅದಕ್ಕೆ ಇನ್ನೊಂದು ಎದೆನಡುಗಿಸುವ ಘಟನೆ ಸೇರ್ಪಡೆಗೊಂಡಿದೆ.
ಶ್ರೀಲಂಕಾ ಮೂಲದ ವ್ಯಕ್ತಿ ಪ್ರಿಯಂತ ಕುಮಾರ್ ಎಂಬುವವರನ್ನು ʼ”ದೇವನಿಂದೆಯ” ಆರೋಪದ ಮೇಲೆ ಉಗ್ರ ಇಸ್ಲಾಮಿಸ್ಟ್ ಗುಂಪು ಚಿತ್ರ ಹಿಂಸೆ ನೀಡಿ ಜೀವಂತ ದಹನ ಮಾಡಿದೆ. ನಡುರಸ್ತೆಯಲ್ಲೇ ಉನ್ಮಾದಿತರ ಗುಂಪು ಯಾವ ಕಾನೂನಿನ ಭಯವೂ ಇಲ್ಲದೇ ವ್ಯಕ್ತಿಯನ್ನು ಸುಟ್ಟು ಕೊಂದಿರುವುದನ್ನು ಜಗತ್ತು ದಿಗ್ಭ್ರಮೆಯಿಂದ ನೋಡಿದೆ.
ಸಿಯಾಲ್ಕೋಟ್ ಪ್ರದೇಶದ ಕಾರ್ಖಾನೆಯೊಂದರಲ್ಲಿ ಪ್ರಿಯಾಂತ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಈ ಘಟನೆಗೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಇಸ್ಲಾಮಿಕ್ ಜನರ ಗುಂಪು “ಆತ ( ಪ್ರಿಯಂತ ಕುಮಾರ್ ) ಕುರಾನ್ ಪುಸ್ತಕವನ್ನು ಕಸದ ಬುಟ್ಟಿಗೆ ಎಸೆದಿದ್ದಾನೆ” ಎಂದು ಘೋಷಣೆ ಕೂಗುತ್ತಿರುವುದು ಕೇಳಿಬರುತ್ತಿದೆ.
"Kaafir ke bacche ne Quran ki ayatein dustbin mein fainki hain (son of kaafir has thrown verses of Quran in dustbin)," a man is heard saying in the crowd that killed & burnt a Sri Lankan identified as Priyantha Kumara, in Pakistan's Sialkot.
Priyantha was manager of RajCo factory pic.twitter.com/RRR3pGDaGz— Swati Goel Sharma (@swati_gs) December 3, 2021