News Karnataka Kannada
Tuesday, April 30 2024
ವಿದೇಶ

ಖಜಕಿಸ್ತಾನ: ಹಿಂಸಾಚಾರಕ್ಕೆ 160 ಜನ ಬಲಿ ,6,000 ಜನ ಬಂಧನ.

Breaking News
Photo Credit :

ಖಜಕಿಸ್ತಾನ: ಇಂಧನ ಬೆಲೆ ಏರಿಕೆಯಿಂದಾಗಿ ಹೊತ್ತಿದ ಕಿಡಿ ಖಜಕಿಸ್ತಾನದಲ್ಲಿ ಅಕ್ಷರಶಃ ಯುದ್ಧಭೂಮಿಯಂತೆ ಸೃಷ್ಟಿಯಾಗಿದೆ.ಅಲ್ಮಾಟಿ ನಗರವೊಂದರಲ್ಲೇ 103 ಮಂದಿ ಪ್ರಾಣ ಬಿಟ್ಟಿದ್ದಾರೆ. ಸಾವಿನ ಸಂಖ್ಯೆ ಇನ್ನು ಹೆಚ್ಚಾಗುವ ಸಾಧ್ಯತೆ ಇದೆ. 16 ಮಂದಿ ಭದ್ರತಾ ಸಿಬ್ಬಂದಿಯೂ ಪ್ರಾಣ ತೆತ್ತಿದ್ದಾರೆ.

ಕಳೆದ ಎರಡು ವಾರಗಳಿಂದ ನಡೆಯುತ್ತಿರುವ ಹಿಂಸಾಚಾರಕ್ಕೆ ಅಲ್ಲಿನ ಜನ ನಲುಗಿ ಹೋಗಿದ್ದಾರೆ.ಈ ಹಿಂಸಾಚಾರದಿಂದಾಗಿ ಸುಮಾರು 160 ಜನ ಪ್ರಾಣ ಕಳೆದುಕೊಂಡಿದ್ದಾರೆ.ಅಷ್ಟೆ ಅಲ್ಲ, ಈ ಹಿಂಸಾಚಾರದ ನಡುವೆ ನೂರಾರು ಬ್ಯಾಂಕ್ ಗಳನ್ನು ಲೂಟಿ ಮಾಡಲಾಗಿದೆ, 400 ಕ್ಕೂ ಹೆಚ್ಚು ವಾಹನಗಳು ಧ್ವಂಸವಾಗಿವೆ.

ಇದಕ್ಕೆಲ್ಲಾ ಕಾರಣ ಇಂಧನ ಬೆಲೆ ಏರಿಕೆ ಎನ್ನಲಾಗಿದೆ. ಖಜಕಿಸ್ತಾನದಲ್ಲಿ ಅಪಾರ ನೈಸರ್ಗಿಕ ಸಂತ್ತು ಇದ್ದರು ಅಲ್ಲಿನ ಸರ್ಕಾರ ರಾತ್ರೋ ರಾತ್ರಿ ಇಂಧನ ಬೆಲೆ ಏರಿಕೆ ಮಾಡಿದೆ. ಎಲ್ಪಿಜಿ ಬೆಲೆ 8 ರೂಪಾಯಿ ಇದ್ದದ್ದನ್ನು ದಿಢೀರನೆ ಏರಿಕೆ ಮಾಡಿದೆ.

ಇದು ಪ್ರತಿಭಟನಕಾರರನ್ನ ಕೆರಳಿಸಿದೆ. ಇಂಧನ ಬೆಲೆ ಏರಿಕೆ ಸಂಬಂಧ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಸಾವು ನೋವುಗಳು ಮುಂದುವರೆದಿವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು