ಕಳೆದ 8 ದಿನಗಳಿಂದಲೂ ನಡೆಯುತ್ತಿರುವ ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧದಿಂದ ಉಕ್ರೇನ್ ಅಕ್ಷರಶಹ ನಲುಗಿ ಹೋಗಿದ್ದು, ಈಗಾಗಲೇ ಕೀವ್, ಖಾರ್ಕಿವ್ ಸೇರಿದಂತೆ ಬಹುತೇಕ ಎಲ್ಲ ನಗರಗಳು ಧ್ವಂಸಗೊಂಡಿವೆ.
ಇತ್ತ ಉಕ್ರೇನ್ ಅನ್ನು ಪುನರ್ ನಿರ್ಮಿಸೋದಾಗಿ ಅಧ್ಯಕ್ಷ ಝೆಲೆನ್ಸ್ಕಿ ಪ್ರತಿಜ್ಞೆ ಮಾಡಿದ್ದಾರೆ. ಉಕ್ರೇನಿಯರ ವಿರುದ್ಧ ಸಮರ ಸಾರಿರುವ ನೀವೂ ಪ್ರತಿವೊಂದಕ್ಕೂ ಮರುಪಾವತಿ ಮಾಡಬೇಕಾಗುತ್ತದೆ.
ಪ್ರತಿವೊಂದು ಮನೆ, ಬೀದಿ, ನಗರ ಪುನಃ ಸ್ಥಾಪಿಸುತ್ತೇವೆ ಎಂದಿರುವ ವೊಲೊಡಿಮಿರ್, ರಷ್ಯಾ ಸೈನಿಕರ ಮೃತ ದೇಹದಿಂದ ಉಕ್ರೇನ್ ಆವೃತವಾಗುವುದನ್ನು ಬಯಸುವುದಿಲ್ಲ. ಎಲ್ಲರೂ ನಿಮ್ಮ ದೇಶಕ್ಕೆ ಮರಳಿ ಎಂದು ಎಚ್ಚರಿಕೆ ನೀಡಿದ್ದಾರೆ.