News Karnataka Kannada
Wednesday, May 08 2024
ವಿದೇಶ

ಹಠ ಬಿಟ್ಟು ಭಾರತದೊಂದಿಗೆ ಉತ್ತಮ ಬಾಂಧವ್ಯ ಹೊಂದಬೇಕು; ಮುಯಿಜುಗೆ ಮಾಜಿ ಅಧ್ಯಕ್ಷರಿಂದ ಪಾಠ

ಮಾಲ್ಡೀವ್ಸ್‌ನಲ್ಲಿ ಉಂಟಾಗಿರುವ ಹಣಕಾಸು ಬಿಕ್ಕಟ್ಟನ್ನು ಸರಿಪಡಿಸಿಕೊಳ್ಳಲು ಹಠ ಬಿಟ್ಟು ನೆರೆಯ ದೇಶಗಳೊಂದಿಗೆ ಒಳ್ಳೆಯ ಬಾಂಧವ್ಯ ಹೊಂದಬೇಕು ಎಂದು ಮೊಹಮ್ಮದ್‌ ಮುಯಿಜುಗೆ ಮಾಜಿ ಅಧ್ಯಕ್ಷ ಇಬ್ರಾಹಿಮ್‌ ಮೊಹಮದ್‌ ಸೊಲಿಹ್‌ ಸಲಹೆ ನೀಡಿದ್ದಾರೆ.
Photo Credit : NewsKarnataka

ಮಾಲೆ: ಮಾಲ್ಡೀವ್ಸ್‌ನಲ್ಲಿ ಉಂಟಾಗಿರುವ ಹಣಕಾಸು ಬಿಕ್ಕಟ್ಟನ್ನು ಸರಿಪಡಿಸಿಕೊಳ್ಳಲು ಹಠ ಬಿಟ್ಟು ನೆರೆಯ ದೇಶಗಳೊಂದಿಗೆ ಒಳ್ಳೆಯ ಬಾಂಧವ್ಯ ಹೊಂದಬೇಕು ಎಂದು ಮೊಹಮ್ಮದ್‌ ಮುಯಿಜುಗೆ ಮಾಜಿ ಅಧ್ಯಕ್ಷ ಇಬ್ರಾಹಿಮ್‌ ಮೊಹಮದ್‌ ಸೊಲಿಹ್‌ ಸಲಹೆ ನೀಡಿದ್ದಾರೆ.

ಇತ್ತೀಚೆಗಷ್ಟೆ ಭಾರತ ತಮ್ಮ ಸಾಲ ಮನ್ನಾ ಮಾಡಬೇಕು ಎಂದು ಅಧ್ಯಕ್ಷ ಮುಯಿಜು ಕೇಳಿಕೊಂಡಿದ್ದರು.

ʼನೆರೆಹೊರೆಯವರು ನಮಗೆ ಸಹಾಯ ಮಾಡುತ್ತಾರೆಂದು ನಾನು ನಂಬಿದ್ದೇನೆ. ಇದಕ್ಕಾಗಿ ನಾವು ಹಠ ಬಿಟ್ಟು ಮಾತುಕತೆಗೆ ಮುಂದಾಗಬೇಕು. ಆದರೆ ಮುಯಿಜು ಇದಕ್ಕೆ ತಯಾರಿಲ್ಲʼ ಎಂದ ಸೊಲಿಹ್‌, ನಮ್ಮ ಸರ್ಕಾರಕ್ಕೆ ಈಗ ಪರಿಸ್ಥಿತಿ ಅರ್ಥವಾಗಲು ಶುರುವಾಗಿದೆ ಎಂದರು.

ಭಾರತವನ್ನು ಮಾಲ್ಡೀವ್ಸ್‌ನಿಂದ ಹೊರಹಾಕುವ ಭರವಸೆಯೊಂದಿಗೆ ಚುನಾವಣೆ ಎದುರಿಸಿದ್ದ ಚೀನಾ ಪರ ನಾಯಕ ಮುಯಿಜು ಇತ್ತೀಚೆಗೆ ಭಾರತೀಯ ಅಧಿಕಾರಿಗಳನ್ನು ವಾಪಸ್‌ ಕರೆಸಿಕೊಳ್ಳುವಂತೆ ಭಾರತ ಸರ್ಕಾರಕ್ಕೆ ತಾಕೀತು ಮಾಡಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು