ನವದೆಹಲಿ: ಮಾಲ್ಡೀವ್ಸ್ ನ ಮೂರು ಮಂತ್ರಿಗಳಿಂದ ಭಾರತದ ಘನತೆಗೆ ಧಕ್ಕೆ ತರುವಂತಹ ಹೇಳಿಕೆಗಳು ಬಂದ ಬೆನ್ನಲ್ಲೇ ಅದಕ್ಕೆ ಪ್ರತಿಕ್ರಿಯಿಸಿರುವ ಲಕ್ಷದ್ವೀಪದ ಅಧಿಕಾರಿ ಪ್ರಫುಲ್ ಪಟೇಲ್, ʼಇಂತಹ ಅವಮಾನವನ್ನು ಭಾರತ ಸಹಿಸುವುದಿಲ್ಲ. ಪ್ರಧಾನಿ ಮೋದಿ ಹಾಗು ಲಕ್ಷದ್ವೀಪದ ಪರ ನಿಂತ ಭಾರತೀಯರಿಗೆ ಧನ್ಯವಾದಗಳುʼ ಎಂದಿದ್ದಾರೆ.
ಹೇಳಿಕೆ ನೀಡಿದ ಮಂತ್ರಿಗಳು ಸಾಮೂಹಿಕವಾಗಿ ಕ್ಷಮೆ ಯಾಚಿಸಿದರೂ ಅದನ್ನು ಗಣನೆಗೆ ತೆಗೆದುಕೊಳ್ಳದೆ ಅವರನ್ನು ಅಮಾನತುಗೊಳಿಸಿದ ಬಗ್ಗೆ ಮಾತಾಡಿದ ಪಟೇಲ್, ʼ ಅಂತಹ ಹೇಳಿಕೆ ನೀಡುವುದು ಸರಿಯಲ್ಲ. ಮಾಡಿದ ತಪ್ಪಿಗೆ ಮಾಲ್ಡೀವ್ಸ್ ಸರ್ಕಾರದಿಂದ ಶಿಕ್ಷೆಯಾಗಿದೆ. ಭಾರತದ ನಟರು, ಕ್ರಿಕೆಟಿಗರು ಸೇರಿದಂತೆ ಜನಸಾಮಾನ್ಯರೂ ಇದನ್ನು ವಿರೋಧಿಸಿದ್ದಾರೆʼ ಎಂದರು.
ಪ್ರಧಾನಿ ಮೋದಿ ಮಾಲ್ಡೀವ್ಸ್ ಭೇಟಿಯ ಫೋಟೋಗಳನ್ನು ಹಂಚಿಕೊಂಡು ಲಕ್ಷದ್ವೀಪ ರಜಾದಿನಗಳನ್ನು ಕಳೆಯಲು ಸೂಕ್ತ ಸ್ಥಳವೆಂಬಂತೆ ಬಿಂಬಿಸಿದ್ದರು. ಇದನ್ನು ಟೀಕಿಸಿ ಮಾಲ್ಡೀವ್ಸ್ ನ ಮಂತ್ರಿಗಳಾದ ಮರಿಯಮ್ ಶಿಯುನ, ಮಲ್ಶಾ ಶರೀಪ್ ಮತ್ತು ಮಹ್ಝೂಮ್ ಮಜಿದ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದರು. ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾದ ಬೆನ್ನಲ್ಲೇ ಮೂವರ ಮೇಲೆ ಕ್ರಮ ಕೈಗೊಳ್ಳಲಾಗಿದೆ.
ಮಾಲ್ಡೀವ್ಸ್ ಪ್ರವಾಸೋದ್ಯಮವನ್ನು ಅವಲಂಬಿಸಿದ್ದು, ಭಾರತೀಯರು ತಮ್ಮ ರಜಾ ದಿನಗಳನ್ನು ಇಲ್ಲಿನ ಸಮುದ್ರ ದಂಡೆಯಲ್ಲಿ ಕಳೆಯಲು ಇಷ್ಟಪಡುತ್ತಿದ್ದರು.
ಇತ್ತೀಚೆಗೆ ಆದ ಬೆಳವಣಿಗೆಯ ನಂತರ ಅನೇಕ ಭಾರತೀಯರು ತಮ್ಮ ಮಾಲ್ಡೀವ್ಸ್ ಪ್ರವಾಸವನ್ನು ರದ್ದುಗೊಳಿಸಿರುವುದು ವರದಿಯಾಗಿದೆ.
ಈಗ ಮಾಲ್ಡೀವ್ಸ್ ನಲ್ಲಿ ಚೀನಾ ಪರವೆಂದು ಗುರುತಿಸಿಕೊಂಡಿರುವ ಮೊಹಮ್ಮದ್ ಮೋಯಿಝು ಅಧ್ಯಕ್ಷನಾಗಿದ್ದನೆ.