News Karnataka Kannada
Tuesday, April 30 2024
ವಿದೇಶ

ನಾಲ್ಕು ದಿನದ ವರುಣನ ಆರ್ಭಟಕ್ಕೆ 63 ಮಂದಿ ಬಲಿ, 100ಕ್ಕೂ ಹೆಚು ಮಂದಿ ನಾಪತ್ತೆ

ಇಲ್ಲಿವರೆಗೆ ಬಿಸಿಲಿನ ಶಾಪ ತಡೆದ ನಮಗೆ ಇದೀಗ ವರುಣನ ಶಾಪವನ್ನು ತಡೆಯಬೇಕಾಗಿದೆ. ಆರ್ಭಟಿಸುತ್ತ ಬರುತ್ತಿರುವ ವರುಣನಿಗೆ ಈಗಾಗಲೇ ಜನ ಆಸ್ತಿ ಕೊಚ್ಚಿ ಹೋಗಿದೆ.
Photo Credit : NewsKarnataka

ಪಾಕಿಸ್ತಾನ : ಇಲ್ಲಿವರೆಗೆ ಬಿಸಿಲಿನ ಶಾಪ ತಡೆದ ನಮಗೆ ಇದೀಗ ವರುಣನ ಶಾಪವನ್ನು ತಡೆಯಬೇಕಾಗಿದೆ. ಆರ್ಭಟಿಸುತ್ತ ಬರುತ್ತಿರುವ ವರುಣನಿಗೆ ಈಗಾಗಲೇ ಜನ ಆಸ್ತಿ ಕೊಚ್ಚಿ ಹೋಗಿದೆ.

ಪಾಕಿಸ್ತಾನದಲ್ಲಿ ಕಳೆದ 4 ದಿನಗಳಿಂದ ಧಾರಕಾರವಾಗಿ ಗುಡುಗು, ಮಿಂಚು ಸಮೇತ ಮಳೆಯಾಗುತ್ತಿರುವ ಕಾರಣ 63 ಮಂದಿ ಸಾವನಪ್ಪಿದ್ದು, 100 ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ.ಪಾಕ್​ನಲ್ಲಿ ಭಾರೀ ಮಳೆ ಹಾಗೂ ಗುಡುಗಿನಿಂದ 14 ಜನರು ಮೃತಪಟ್ಟರೇ, ದೇಶದ ವಾಯುಭಾಗದಲ್ಲಿ ಮನೆಗಳು ನೆಲಕ್ಕೆ ಉರುಳಿ 32 ನಿವಾಸಿಗಳು ಸಾವನ್ನಪ್ಪಿದ್ದಾರೆ. ಇದರಲ್ಲಿ 15 ಮಕ್ಕಳು, 5 ಮಹಿಳೆಯರು ಕೂಡ ಸೇರಿದ್ದಾರೆ.

ಬಲೂಚಿಸ್ತಾನ್​​ದಲ್ಲೂ 10 ಮಂದಿ ಸಾವಿಗೀಡಾಗಿದ್ದಾರೆ. 1,370ಕ್ಕೂ ಹೆಚ್ಚು ಮನೆಗಳಿಗೆ ಮಳೆಯಿಂದ ಹಾನಿಯಾಗಿದೆ ಎಂದು ಅಲ್ಲಿನ ವಿಪತ್ತು ನಿರ್ವಹಣಾ ಪ್ರಾಧಿಕಾರ ಮಾಹಿತಿ ನೀಡಿದೆ. ಇದೀಗ ಕಾಣೆಯಾದವರ ಹುಡುಕಾಟದಲ್ಲಿ ರಕ್ಷಣಾ ಸಿಂಬ್ಬಂಧಿ ಕಾರ್ಯಚರಣೆ ನಡೆಸಿದ್ದಾರೆ.

ಪಾಕಿಸ್ತಾನದ ಹಲವು ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿದ್ದು ರಸ್ತೆಗಳು ಗುರುತು ಸಿಗದಂತಾಗಿದೆ.ಹಲವು ಕಡೆ ಮರಗಳು, ಕರೆಂಟ್ ಕಂಬಗಳು ನೆಲಕ್ಕೆ ಉರುಳಿ ಬಿದ್ದಿದ್ದರಿಂದ ವಿದ್ಯುತ್ ಇಲ್ಲದೇ ಜನರು ಪರದಾಡಿದ್ದಲ್ಲದೇ ಪ್ರಯಾಣಿಕರು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ ಎಂದು ಹೇಳಲಾಗಿದೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು