ಲಖನೌ: ಅಯೋದ್ಯ ರಾಮಮಂದಿರ ವಿವಾದ ಮುಗಿಯುತ್ತಿದ್ದಂತೆ ಜ್ಞಾನವ್ಯಾಪಿ ಕಟ್ಟಡದ ವಿವಾದ ಮುನ್ನೆಲೆಗೆ ಬಂದಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಜ್ಞಾನವ್ಯಾಪಿ ಕಟ್ಟಡದ ಬಗ್ಗೆ ನೀಡಿದ ಹೇಳಿಕೆ ಬಹಳ ಚರ್ಚೆಗೆ ಕಾರಣವಾಗಿದೆ.
ಜ್ಞಾನವಾಪಿ ಮಸೀದಿ ವಿವಾದದ ಬಗ್ಗೆ ಸಿಎಂ ಯೋಗಿ ಆದಿತ್ಯನಾಥ್ ಮೊದಲ ಬಾರಿಗೆ ಬಹಿರಂಗ ಹೇಳಿಕೆ ನೀಡಿದ್ದು, ‘ಜ್ಞಾನವಾಪಿ ಗೋಡೆಗಳು ಜೈಕಾರ ಹಾಕುವ ಮೂಲಕ ಕೂಗಿ ಹೇಳುತ್ತಿವೆ. ಅಲ್ಲಿನ ಪರಿಸ್ಥಿತಿಯನ್ನು ತೋರಿಸುತ್ತಿದೆ. ಜ್ಞಾನವಾಪಿ ವಿಚಾರದಲ್ಲಿ ಐತಿಹಾಸಿಕ ಪ್ರಮಾದ ನಡೆದಿದೆ. ಆದ್ದರಿಂದ ಅದನ್ನು ಮಸೀದಿ ಎಂದು ಕರೆಯುವುದು ತಪ್ಪಾಗುತ್ತದೆ ಎಂದಿದ್ದಾರೆ.
ದೇವರು ಯಾರಿಗೆ ದರ್ಶನ ನೀಡಿದ್ದಾನೋ ಗೊತ್ತಿಲ್ಲ. ಆದರೆ ಮಸೀದಿಯಲ್ಲಿ ತ್ರಿಶೂಲ ಏನು ಮಾಡುತ್ತಿದ್ದೆ ಎಂದು ನೋಡಲು ಎಂದು ನಾನು ಭಾವಿಸುತ್ತೇನೆ. ಮಸೀದಿಯಲ್ಲಿ ಜ್ಯೋತಿರ್ಲಿಂಗವಿದೆ, ವಿಗ್ರಹಗಳಿವೆ, ಇಡೀ ಗೋಡೆಗಳು ಕೂಗುತ್ತಾ ಹೇಳುತ್ತಿವೆ. ಐತಿಹಾಸಿಕ ತಪ್ಪು ನಡೆದಿದೆ ಎಂಬ ಪ್ರಸ್ತಾವನೆ ಮುಸ್ಲಿಂ ಸಮಾಜದಿಂದ ಬರಬೇಕು, ಅದನ್ನು ಪರಿಹರಿಸಬೇಕು ಎಂದರು.
ಐತಿಹಾಸಿಕ ತಪ್ಪು ನಡೆದಿದೆ ಎಂಬ ಪ್ರಸ್ತಾವನೆ ಮುಸ್ಲಿಂ ಸಮಾಜದಿಂದ ಬರಬೇಕು, ಅದನ್ನು ಪರಿಹರಿಸಬೇಕು ಎಂದರು. ಈ ಹೇಳಿಕೆ ಕುರಿತು ಈಗ ಪರ ವಿರೋಧ ಚರ್ಚೆಗಳು ಆರಂಭಗೊಂಡಿದೆ.