ಪಶ್ಚಿಮ ಬಂಗಾಳ: ಆನೆಯೊಂದು ತನ್ನ ಮರಿಯ ಸಾವಿನಿಂದ ನೊಂದು ಇಬ್ಬರು ವೃದ್ಧರನ್ನ ಕೊಂದಿರುವ ಘಟನೆ ಪಶ್ಚಿಮ ಬಂಗಾಳದ ಜಾರ್ಗ್ರಾಮ್ ಗ್ರಾಮದಲ್ಲಿ ನಡೆದಿದೆ.
ಮೃತರು 60 ವರ್ಷದ ಆನಂದ್ ಹಾಗೂ ಶಶಧರ್ ಮಹಾತಾ ಎಂದು ತಿಳಿದು ಬಂದಿದೆ.
ಜನರು ಮರಿ ಆನೆಯ ಶವ ನೋಡಲು ಬಂದಿದ್ದ ವೇಳೆ ಆನೆ ದಾಳಿ ನಡೆಸಿದ್ದು, ಆನೆ ದಾಳಿ ಮಾಡ್ತಾ ಇದ್ದ ವೇಳೆ ಎಲ್ಲಾ ಜನ ಓಡಿ ಹೋಗಿದ್ದಾರೆ. ಆದರೆ ಇಬ್ಬರು ವೃದ್ಧರು ಮಾತ್ರ ಆನೆ ದಾಳಿಗೆ ಸಿಲುಕಿದ್ದಾರೆ ಎನ್ನಲಾಗ್ತಿದೆ. ಇನ್ನೂ ಕೋಪಗೊಂಡ ಆನೆ ರಾಮೇಶ್ವರ ದೇವಸ್ಥಾನದ ಬಳಿ ಇರುವ ಚಾಂದಬಿಲಾ ಬಳಿ ನಿಂತಿದ್ದ ಬಸ್ ಹಾಗೂ ಬೈಕ್ ಅನ್ನು ಬೀಳಿಸಿ ಸಿಟ್ಟು ತೋರಿಸಿಕೊಂಡಿದೆ.
ಆನೆಯ ದಾಳಿಯಿಂದ ಪರಿಸ್ಥಿತಿಯನ್ನು ಹತೋಟಿಗೆ ತರಲು 40 ಮಂದಿ ಅರಣ್ಯ ಸಿಬ್ಬಂದಿ ತಂಡವನ್ನು ನಿಯೋಜಿಸಲಾಗಿದೆ ಎಂದು ಡಿಎಫ್ಒ ಶಿವಾನಂದ ರಾವ್ ಹೇಳಿದ್ದಾರೆ.