News Karnataka Kannada
Saturday, April 27 2024
ಉತ್ತರಖಂಡ

ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರಿಗೆ ಆಹಾರ, ಖಿನ್ನತೆ ನಿವಾರಕ ಮಾತ್ರೆ ಪೂರೈಕೆ

Supply of food, anti-depressant pills to workers stuck in Kannada tunnel
Photo Credit : News Kannada

ಉತ್ತರಕಾಶಿ: ಯಮುನೋತ್ರಿ ಹೆದ್ದಾರಿಯಲ್ಲಿ ನಿರ್ಮಾಣ ಹಂತದಲ್ಲಿರುವ ಸಿಲ್ಕ್ಯಾರಾ-ಬಾರ್ಕೋಟ್ ಸುರಂಗದಲ್ಲಿ ಭಾನುವಾರ ಬೆಳಗ್ಗೆಯಿಂದ ಸಿಲುಕಿರುವ 40 ಕಟ್ಟಡ ಕಾರ್ಮಿಕರಿಗೆ ಖಿನ್ನತೆ ನಿವಾರಕ ಮಾತ್ರೆಗಳನ್ನು ನೀಡಲಾಗುತ್ತಿದೆ ಎಂದು ಉತ್ತರಾಖಂಡ ಸರ್ಕಾರ ಶನಿವಾರ ತಿಳಿಸಿದೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ರಾಜ್ಯ ಸರ್ಕಾರ, ”ಆರೋಗ್ಯ ಇಲಾಖೆಯು ಸುರಂಗದ ಹೊರಗೆ ಕಟ್ಟಡದಲ್ಲಿ ಶಿಬಿರವನ್ನು ಸ್ಥಾಪಿಸಿದ್ದು, ಅಲ್ಲಿ ಆರು ಹಾಸಿಗೆಗಳನ್ನು ಅಗತ್ಯ ಔಷಧಿಗಳೊಂದಿಗೆ ವ್ಯವಸ್ಥೆ ಮಾಡಲಾಗಿದೆ. ಸುರಂಗದ ಹೊರಗೆ ಒಟ್ಟು 10 ಆಂಬ್ಯುಲೆನ್ಸ್‌ಗಳನ್ನು ನಿಯೋಜಿಸಲಾಗಿದೆ. ವೈದ್ಯರು ಮತ್ತು ಇತರ ಆರೋಗ್ಯ ಕಾರ್ಯಕರ್ತರು ಕೂಡ ಅಲ್ಲಿಯೇ ಠಿಕಾಣಿ ಹೂಡಿದ್ದಾರೆ. ಸಿಕ್ಕಿಬಿದ್ದ ಕಾರ್ಮಿಕರಿಗೆ ವಿಟಮಿನ್ ಸಿ, ಮತ್ತು ಡಿ, ಬಿಕೋಸಿಲ್ ಝಡ್, ಖಿನ್ನತೆ-ನಿರೋಧಕ ಮಾತ್ರೆಗಳನ್ನು ನೀಡಲಾಯಿತು.
ಉತ್ತರಕಾಶಿಯ ಮುಖ್ಯ ವೈದ್ಯಕೀಯ ಅಧಿಕಾರಿ (ಸಿಎಂಒ) ಡಾ ಆರ್‌ಸಿಎಸ್ ಪನ್ವಾರ್, “ನಾವು ಸುರಂಗದೊಳಗೆ ಸಿಕ್ಕಿಬಿದ್ದ ಕಾರ್ಮಿಕರಿಗೆ ಸಮಾಲೋಚನೆಗಾಗಿ ಮನೋವೈದ್ಯರು ಮತ್ತು ಹಿರಿಯ ವೈದ್ಯರನ್ನು ಕಳುಹಿಸುತ್ತಿದ್ದೇವೆ. ಅವರಲ್ಲಿ ಕೆಲವರು ಕೆಲವು ದಿನಗಳ ಹಿಂದೆ ವಾಂತಿ ಮತ್ತು ಹೊಟ್ಟೆ ತೊಳೆಸುವಿಕೆ ಬಗ್ಗೆ ದೂರು ನೀಡಿದ್ದರು. ಪೈಪ್ ಮೂಲಕ ಔಷಧಗಳನ್ನು ಪೂರೈಸಿದ್ದೇವೆ. ನಾವು ಅವರಿಗೆ ವಿಟಮಿನ್ ಸಿ ಮತ್ತು ಡಿ ಯಂತಹ ಅಗತ್ಯ ಪೂರಕಗಳನ್ನು ನೀಡುತ್ತಿದ್ದೇವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು